Asianet Suvarna News Asianet Suvarna News

ಉದ್ಯೋಗದಲ್ಲಿ ಕಾಡುವ ಸಮಸ್ಯೆಗೆ ಆಲದ ಮರದಲ್ಲಿದೆ ಪರಿಹಾರ

ವಿದ್ಯೆಗೆ ತಕ್ಕಂತೆ ಉದ್ಯೋಗ ಸಿಗುವುದು ಕಷ್ಟ. ಸಿಕ್ಕ ಉದ್ಯೋಗದಲ್ಲಿ ಬಡ್ತಿ ಬೇಕು, ನೆಮ್ಮದಿ ಬೇಕು ಎನ್ನುವವರಿಗೆ ಅದು ಕೂಡ ಸುಲಭವಾಗಿ ಸಿಗುವುದಿಲ್ಲ. ಕೆಲಸದಲ್ಲಿ, ಕೆಲಸದ ಸ್ಥಳದಲ್ಲಿ ನಿಮಗೆ ಸಮಸ್ಯೆಯಾಗ್ತಿದ್ದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದ ಪರಿಹಾರವನ್ನು ನೀವು ಮಾಡಬಹುದು.
 

Banyan Tree Astro Remedies For Job
Author
First Published Dec 28, 2022, 1:22 PM IST

ಜೀವನ ನಿರ್ವಹಣೆಗೆ ಹಣದ ಅಗತ್ಯವಿದೆ. ಹಣಕ್ಕಾಗಿ ಉದ್ಯೋಗ, ವ್ಯಾಪಾರ, ಕೃಷಿ ಇತ್ಯಾದಿಗಳನ್ನು ಆಶ್ರಯಿಸಬೇಕಾಗುತ್ತದೆ. ಕೆಲವು ಬಾರಿ ಎಷ್ಟೇ ಪ್ರಯತ್ನಪಟ್ಟರೂ ನಾವು ಬಯಸಿದ ಉದ್ಯೋಗ ನಮಗೆ ಸಿಗುವುದಿಲ್ಲ.  ಹೋದ ಸಂದರ್ಶನದಲ್ಲೆಲ್ಲ ಬರಿಗೈನಲ್ಲಿ ಬರುವಂತಾಗುತ್ತದೆ. ಉದ್ಯೋಗ ಕೈತಪ್ಪಲು ಅನೇಕ ಕಾರಣವಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂಡ ಉದ್ಯೋಗಕ್ಕೆ ಸಂಬಂಧಿಸಿದಂತೆ ಅನೇಕ ಸಂಗತಿಯನ್ನು ಹೇಳಲಾಗಿದೆ. ಒಳ್ಳೆಯ ಕೆಲಸ ಬೇಕು, ಕೈತುಂಬ ಸಂಬಳ ಬೇಕು ಎನ್ನುವವರು ಕೆಲವೊಂದು ಉಪಾಯಗಳನ್ನು ಮಾಡಬಹುದು. 

ಹಿಂದೂ (Hindu) ಧರ್ಮದಲ್ಲಿ ಆಲದ ಮರವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಆಲದ (Banyan) ಮರವನ್ನು ಪೂಜಿಸುವುದರಿಂದ ಗಂಡನ ಆಯುಷ್ಯ ವೃದ್ಧಿಯಾಗುತ್ತದೆ. ಹೆಂಡತಿಗೆ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆ ಇದೆ. ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಆಲದ ಮರವನ್ನು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆಲದ ಮರ ಅನೇಕ ಸಮಸ್ಯೆಗೆ ಪರಿಹಾರವಾಗಿದೆ. ಆಲದ ಮರದ ಮೂಲಕ ಉದ್ಯೋಗ (Employment) ಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಗಳನ್ನು ನಿವಾರಿಸಬಹುದು. ನಾವಿಂದು ಆಲದ ಮರದ ಯಾವ ಉಪಾಯದಿಂದ ಉದ್ಯೋಗದಲ್ಲಿ ಪ್ರಗತಿ ಕಾಣಬಹುದು ಎಂಬುದನ್ನು ನಿಮಗೆ ಹೇಳ್ತೆವೆ.

VEDIC ASTROLOGY: ಆರೋಗ್ಯದ ಜೊತೆ ಸಂಪತ್ತು ವೃದ್ಧಿಸುತ್ತೆ ಕೇಸರಿ

ಉದ್ಯೋಗ ಪಡೆಯಲು ಈ ಸುಲಭ ಉಪಾಯ ಮಾಡಿ : ನಿಮ್ಮ ಪ್ರಯತ್ನಕ್ಕೆ ಫಲ ಸಿಗ್ತಿಲ್ಲ, ಉದ್ಯೋಗ ಪಡೆಯಲು ಅಡಚಣೆಯಾಗ್ತಿದೆ ಎಂದಾದ್ರೆ ಆಲದ ಮರದ ಎಲೆಯನ್ನು ತೆಗೆದುಕೊಳ್ಳಿ. ಈ ಎಲೆಯ ಮೇಲೆ ನಿಮ್ಮ ಸಮಸ್ಯೆಯನ್ನು ಬರೆಯಿರಿ. ಭಾನುವಾರದಂದು ಆ ಎಲೆಯನ್ನು ನೀರಿನಲ್ಲಿ ತೊಳೆಯಿರಿ. ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಶೀಘ್ರವೇ ಕೆಲಸ ಪ್ರಾಪ್ತಿಯಾಗುತ್ತದೆ. 

ಆಲದ ಮರಕ್ಕೆ ಅರಿಶಿನ- ಕುಂಕುಮ ಅರ್ಪಿಸಿ : ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ಸಮಸ್ಯೆಯಾಗ್ತಿದೆ, ಕೆಲಸ ಕಳೆದುಕೊಳ್ಳುವ ಅಪಾಯವಿದೆ ಎಂದಾದ್ರೆ ನೀವು ಶನಿವಾರದಂದು ಆಲದ ಮರದ ಬುಡಕ್ಕೆ ಅರಿಶಿನ ಮತ್ತು ಕುಂಕುಮವನ್ನು ಅರ್ಪಿಸಬೇಕು. ಇದರಿಂದ ಸಮಸ್ಯೆ ಪರಿಹಾರವಾಗಲಿದೆ. ಉದ್ಯೋಗದಲ್ಲಿ ಭದ್ರತೆಯನ್ನು ನೀವು ಪಡೆಯುತ್ತೀರಿ. 

ಆಲದ ಮರದ ಕೆಳಗೆ ದೀಪ ಹಚ್ಚಿ ಪರಿಹಾರ ಕಂಡುಕೊಳ್ಳಿ : ಕಚೇರಿಯಲ್ಲಿ ಅಥವಾ ನೀವು ಕೆಲಸ ಮಾಡುವ ಸ್ಥಳದಲ್ಲಿ ಪದೇ ಪದೇ ಯಾರೊಂದಿಗಾದರೂ ಜಗಳ ನಡೆಯುತ್ತಿದ್ದರೆ ಅದಕ್ಕೂ ಆಲದ ಮರ ಪರಿಹಾರ ನೀಡುತ್ತದೆ. ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದರೆ ವಿಷ್ಣುವನ್ನು ಸ್ಮರಿಸಬೇಕು. ನಂತ್ರ ಆಲದ ಮರದ ಕೆಳಗೆ ದೀಪ ಹಚ್ಚಬೇಕು. ಇದರಿಂದ ಜಗಳ ಕಡಿಮೆಯಾಗುವುದಲ್ಲದೆ ನಿಮಗೆ ಕೆಲಸದ ಜಾಗದಲ್ಲಿ ನೆಮ್ಮದಿ ಸಿಗುತ್ತದೆ. 

ಈ ರಾಶಿಯಲ್ಲಿ ಜನಿಸಿದವರು ಬರೀ ಜುಗ್ಗರು! ನಿಮ್ಮ ಜೊತೆ ಯಾರಿದ್ದಾರೆ ಇಂಥವರು?

ಭಯವನ್ನು ಹೀಗೆ ಹೋಗಲಾಡಿಸಿ : ಕಚೇರಿಯಲ್ಲಿ ನಿಮಗೆ ಭಯವಾಗ್ತಿದ್ದರೆ, ಸಹೋದ್ಯೋಗಿಗಳಿಂದ ಬೆದರಿಕೆ ಬರ್ತಿದ್ದರೆ ಹೆದರಬೇಕಾಗಿಲ್ಲ. ನೀವು ಆಲದ ಮರದ ಕೆಳಗೆ ಕುಳಿತು ಹನುಮಾನ್ ಚಾಲೀಸಾವನ್ನು ಪಠಿಸಬೇಕು. ಇದ್ರಿಂದ ನಿಮ್ಮ ಭಯ ದೂರವಾಗುತ್ತದೆ. 

ಪದೇ ಪದೇ ಅನಾರೋಗ್ಯ ಕಾಡ್ತಿದೆಯಾ? : ಆರೋಗ್ಯ ಬಹಳ ಮುಖ್ಯ. ಆರೋಗ್ಯವಿದ್ರೆ ಕೆಲಸವನ್ನು ಸುಲಭವಾಗಿ ಮಾಡಬಹುದು. ಪದೇ ಪದೇ ಅನಾರೋಗ್ಯಕ್ಕೆ ಒಳಗಾಗ್ತಿದ್ದು, ರಜೆ ಹಾಕ್ತಿದ್ದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ನಿಮಗೂ ಆರೋಗ್ಯ ಹಾಳಾಗ್ತಿದೆ ಎಂದಾದ್ರೆ ಆಲದ ಮರದ ಬೇರನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಒಂದು ತಿಂಗಳು ಮಲಗಿ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ.  

ಕೆಲಸದ ಪ್ರಗತಿಗೆ ಹೀಗೆ ಮಾಡಿ : ಕೆಲಸದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲವೆಂದಾದ್ರೆ, ಬಡ್ತಿ ಸಿಗ್ತಿಲ್ಲ ಎನ್ನುವವರು ಶನಿವಾರದಂದು ಆಲದ ಮರದ ಬೇರಿನ ಬಳಿ ಸಣ್ಣ ಹೊಂಡವನ್ನು ಮಾಡಿ ಅದರಲ್ಲಿ ಅಡಿಕೆ ಮತ್ತು ನಾಣ್ಯವನ್ನು ಹೂತಿಟ್ಟು ಮಣ್ಣಿನಿಂದ ಮುಚ್ಚಬೇಕು. ನೀವು ಹೀಗೆ ಮಾಡಿದ್ರೆ ನಿಮ್ಮ ಕೆಲಸ ಆದಂತೆ. ಶೀಘ್ರವೇ ಉದ್ಯೋಗದಲ್ಲಿ ಬಡ್ತಿಯನ್ನು ನೀವು ಪಡೆಯಬಹುದು. 
 

Follow Us:
Download App:
  • android
  • ios