ಬದಲಾದ ಸಮಯದಲ್ಲಿ ಪ್ರಸಾರವಾಗಲಿದೆ ಸರಿಗಮಪ
ಅದ್ಭುತ ಕಂಠಸಿರಿಯಿಂದ ಪ್ರೇಕ್ಷಕರ ಮನಸೂರೆಗೊಂಡಿರುವ ಖ್ಯಾತ ರಿಯಾಲಿಟಿ ಶೋ ಸರಿಗಮಪ ಸೀಸನ್ 15 ಇನ್ನು ಮುಂದೆ ಬದಲಾದ ಸಮಯದಲ್ಲಿ ಪ್ರಸಾರವಾಗಲಿದೆ.
ಬೆಂಗಳೂರು (ನ. 09): ಅದ್ಭುತ ಕಂಠಸಿರಿಯಿಂದ ಪ್ರೇಕ್ಷಕರ ಮನಸೂರೆಗೊಂಡಿರುವ ಖ್ಯಾತ ರಿಯಾಲಿಟಿ ಶೋ ಸರಿಗಮಪ ಸೀಸನ್ 15 ಇನ್ನು ಮುಂದೆ ಬದಲಾದ ಸಮಯದಲ್ಲಿ ಪ್ರಸಾರವಾಗಲಿದೆ.
ಇದುವರೆಗೂ ಪ್ರತಿ ಶನಿವಾರ- ಭಾನುವಾರ ರಾತ್ರಿ 7.30 ಕ್ಕೆ ಪ್ರಸಾರವಾಗುತ್ತಿದ್ದ ಸರಿಗಮಪ ಇನ್ಮುಂದೆ 8 ಗಂಟೆಗೆ ಪ್ರಸಾರವಾಗಲಿದೆ. ಪ್ರತಿವಾರ ಏನಾದರೊಂದು ವಿಶೇಷ ಸುತ್ತನ್ನು ಒಳಗೊಂಡಿರುವ ಈ ಶೋ ಈ ಬಾರಿ ಡುಯೆಟ್ ರೌಂಡ್ ಹೊಂದಿದೆ. ಇಬ್ಬರು ಸ್ಪರ್ಧಿಗಳು ಡ್ಯುಯೆಟ್ ಸಾಂಗ್ ಹಾಡಲಿದ್ದಾರೆ.
ಗಾಯಕರಾದ ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಸಂಗೀತ ಮಾಂತ್ರಿಕ ಹಂಸಲೇಖ ಸಾರಥ್ಯ ವಹಿಸಿದ್ದಾರೆ. ಕಳೆದ ಸೀಸನ್ ನಲ್ಲಿ ಕಾಣೆಯಾಗಿದ್ದ ರಾಜೇಶ್ ಕೃಷ್ಣನ್ ಈ ಬಾರಿ ಆಗಮಿಸಿದ್ದಾರೆ. ರಾಜೇಶ್ ಕೃಷ್ಣನ್ ಆಗಮನ ಇನ್ನಷ್ಟು ಕಳೆ ತಂದಿದೆ.