ಅಂದುಕೊಂಡಂತೆ ಆಗಿದ್ದರೆ ಎಸ್‌ ನಾರಾಯಣ್‌ ನಿರ್ದೇಶನದ ‘ಪಂಟ' ಸಿನಿಮಾ ಇಷ್ಟೊತ್ತಿಗೆ ಬಿಡುಗಡೆಯಾಗಿ ಮೂರು ವಾರ ಕಳೆಯಬೇಕಿತ್ತು. ಆದರೆ, ಅದೇನಾಯಿತೋ ಗೊತ್ತಿಲ್ಲ ಮೊದಲೇ ನಿಗಧಿ ಮಾಡಿದ್ದ ‘ಪಂಟ'ನ ಬಿಡುಗಡೆಯ ದಿನಾಂಕವನ್ನು ಇದ್ದಕ್ಕಿದಂತೆ ಮುಂದೂಡಲಾಯಿತು. ಹೀಗೆ ಎಸ್‌ ನಾರಾಯಣ್‌ ಸಿನಿಮಾ ಇದ್ದಕ್ಕಿದಂತೆ ಬಿಡುಗಡೆ ಕಾಣದೆ ಹೋಗಿದ್ದರ ಹಿಂದೆ ನಿರ್ದೇಶಕ ಯೋಗರಾಜ್‌ ಭಟ್‌ ಅವರ ಹಾಡಿನ ಕೈವಾಡ ಇದೆ ಎಂದರೆ ಅಚ್ಚರಿಯಾಗಬೇಡಿ. ಯಾಕೆಂದರೆ ಭಟ್ಟರು ‘ಅಲ್ಲಾಡ್ಸು ಅಲ್ಲಾಡ್ಸು...' ಅಂತ ಹಿಟ್‌ ಕೊಟ್ಟರು. ನಾರಾಯಣ್‌ ಅವರಿಗೆ ಈ ಗೆಲುವೇ ಅವರ ಚಿತ್ರದ ಬಿಡುಗಡೆಗೆ ಅಡ್ಡಿಯಾಗಿದೆ. ವಿಷಯ ಇಷ್ಟೇ, ತರುಣ್‌ ಸುಧೀರ್‌ ನಿರ್ದೇಶನದ ‘ಚೌಕ' ಸಿನಿಮಾ ನೀವೆಲ್ಲ ನೋಡಿರುತ್ತೀರಿ. ಈ ಚಿತ್ರದಲ್ಲಿ ಯೋಗರಾಜ್‌ ಭಟ್‌ ಬರೆದಿರುವ ‘ಅಲ್ಲಾಡ್ಸು ಅಲ್ಲಾಡ್ಸು...' ಹಾಡು ಇದೆ. ಇದೇ ರೀತಿಯಲ್ಲಿ ಸೌಂಡು ಮಾಡುವ ಒಂದು ಹಾಡನ್ನು ನಿರ್ದೇಶಕ ಎಸ್‌ ನಾರಾಯಣ್‌ ಅವರ ‘ಪಂಟ' ಚಿತ್ರಕ್ಕೂ ಬೇಕು ಅಂತ ನಿರ್ಮಾಪಕರೇ ಹೇಳಿ ಬರೆಸಿದ್ದರು. ‘ಕುಲುಕು ಕುಲುಕು...' ಎಂದು ಸಾಗುವ ಈ ಹಾಡನ್ನು ಚಿತ್ರದಲ್ಲಿ ಬಳಸುದು ಬೇಡ ಅಂತ ಮೊದಲೇ ತಕರಾರು ತೆಗೆದರು ಎಸ್‌ ನಾರಾಯಣ್‌.
ಅಂದುಕೊಂಡಂತೆ ಆಗಿದ್ದರೆ ಎಸ್ ನಾರಾಯಣ್ ನಿರ್ದೇಶನದ ‘ಪಂಟ' ಸಿನಿಮಾ ಇಷ್ಟೊತ್ತಿಗೆ ಬಿಡುಗಡೆಯಾಗಿ ಮೂರು ವಾರ ಕಳೆಯಬೇಕಿತ್ತು. ಆದರೆ, ಅದೇನಾಯಿತೋ ಗೊತ್ತಿಲ್ಲ ಮೊದಲೇ ನಿಗಧಿ ಮಾಡಿದ್ದ ‘ಪಂಟ'ನ ಬಿಡುಗಡೆಯ ದಿನಾಂಕವನ್ನು ಇದ್ದಕ್ಕಿದಂತೆ ಮುಂದೂಡಲಾಯಿತು. ಹೀಗೆ ಎಸ್ ನಾರಾಯಣ್ ಸಿನಿಮಾ ಇದ್ದಕ್ಕಿದಂತೆ ಬಿಡುಗಡೆ ಕಾಣದೆ ಹೋಗಿದ್ದರ ಹಿಂದೆ ನಿರ್ದೇಶಕ ಯೋಗರಾಜ್ ಭಟ್ ಅವರ ಹಾಡಿನ ಕೈವಾಡ ಇದೆ ಎಂದರೆ ಅಚ್ಚರಿಯಾಗಬೇಡಿ. ಯಾಕೆಂದರೆ ಭಟ್ಟರು ‘ಅಲ್ಲಾಡ್ಸು ಅಲ್ಲಾಡ್ಸು...' ಅಂತ ಹಿಟ್ ಕೊಟ್ಟರು. ನಾರಾಯಣ್ ಅವರಿಗೆ ಈ ಗೆಲುವೇ ಅವರ ಚಿತ್ರದ ಬಿಡುಗಡೆಗೆ ಅಡ್ಡಿಯಾಗಿದೆ. ವಿಷಯ ಇಷ್ಟೇ, ತರುಣ್ ಸುಧೀರ್ ನಿರ್ದೇಶನದ ‘ಚೌಕ' ಸಿನಿಮಾ ನೀವೆಲ್ಲ ನೋಡಿರುತ್ತೀರಿ. ಈ ಚಿತ್ರದಲ್ಲಿ ಯೋಗರಾಜ್ ಭಟ್ ಬರೆದಿರುವ ‘ಅಲ್ಲಾಡ್ಸು ಅಲ್ಲಾಡ್ಸು...' ಹಾಡು ಇದೆ. ಇದೇ ರೀತಿಯಲ್ಲಿ ಸೌಂಡು ಮಾಡುವ ಒಂದು ಹಾಡನ್ನು ನಿರ್ದೇಶಕ ಎಸ್ ನಾರಾಯಣ್ ಅವರ ‘ಪಂಟ' ಚಿತ್ರಕ್ಕೂ ಬೇಕು ಅಂತ ನಿರ್ಮಾಪಕರೇ ಹೇಳಿ ಬರೆಸಿದ್ದರು. ‘ಕುಲುಕು ಕುಲುಕು...' ಎಂದು ಸಾಗುವ ಈ ಹಾಡನ್ನು ಚಿತ್ರದಲ್ಲಿ ಬಳಸುದು ಬೇಡ ಅಂತ ಮೊದಲೇ ತಕರಾರು ತೆಗೆದರು ಎಸ್ ನಾರಾಯಣ್.
ವರದಿ: ಕನ್ನಡ ಪ್ರಭ, ಸಿನಿ ವಾರ್ತೆ
