ರಾಷ್ಟ್ರ ಪ್ರಶಸ್ತಿ ವಿಜೇತ ತಮಿಳು ಚಿತ್ರ 'ವಿಸಾರಣೈ' 89ನೇ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೆಶನಗೊಂಡಿದೆ.

Add Asianetnews Kannada as a Preferred SourcegooglePreferred

ತಮಿಳು ಚಿತ್ರ ಪ್ರಶಸ್ತಿ ಸೇರಿದಂತೆ ಮೂರು ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ವಿಸಾರಣೈ ಚಿತ್ರವು ವಿದೇಶಿ ಭಾಷೆಯ ಚಲನಚಿತ್ರ ವಿಭಾಗಕ್ಕೆ ಅಧಿಕೃತವಾಗಿ ನಾಮನಿರ್ದೇಶನಗೊಂಡಿದೆ.

ವಿಸಾರಣೈ ಚಿತ್ರವನ್ನು ಮೂರುಬಾರಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೆಶಕ ವೆಟ್ರಿಮರನ್ ನಿರ್ದೇಶಿಸಿದ್ದಾರೆ. ಧನುಷ್ ನಿರ್ಮಿಸಿರುವ ಈ ಚಿತ್ರವು 72ನೇ ವೇನಿಸ್ ಫಿಲ್ಮ್ ಫೆಸ್ಟಿವಲ್ ಪ್ರದರ್ಶನಗೊಂಡು 'ಅಮ್ನೆಸ್ಟಿ ಇಂಟರ್'ನ್ಯಾಶನಲ್ ಇಟಾಲಿಯ' ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

ಚಿತ್ರದ ಕುರಿತು:

ವಿಸಾರಣೈ (ವಿಚಾರಣೆ) 2015ರಲ್ಲಿ ತೆರೆಕಂಡ ಕ್ರೈಂ-ರೋಚಕತೆಯನ್ನೊಳಗೊಂಡ ಸಾಕ್ಷ್ಯಚಿತ್ರ ರೂಪದಲ್ಲಿ ನಿರ್ಮಿಸಲಾಗಿದೆ ತಮಿಳು ಚಿತ್ರ. ಎಂ. ಚಂದ್ರಶೇಖರ್ ಅವರು ರಚಿಸಿದ 'ಲಾಕ್ ಅಪ್' ಕಾದಂಬರಿಯಾಧಾರಿತ ಚಿತ್ರವಾಗಿದೆ. ಸಾಕಷ್ಟು ಸಿನಿಪ್ರಿಯರ ಮೆಚ್ಚುಗೆ ಗಳಿಸಿರುವ ಈ ಚಿತ್ರದಲ್ಲಿ ದಿನೇಶ್, ಆನಂದಿ ಹಾಗೂ ಅಂದುಕಲಮ್ ಮುರುಗದಾಸ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಪೊಲೀಸ್ ದೌರ್ಜನ್ಯ, ಭ್ರಷ್ಟಾಚಾರ, ಅನ್ಯಾಯವಾಗಿ ಬಲಿಯಾಗುವ ಅಮಾಯಕರ ಕಥೆಯನ್ನು ಈ ಚಿತ್ರವು ಒಳಗೊಂಡಿದೆ.

89ನೇ ಆಸ್ಕರ್ ಅಕಾಡಮಿ ಪ್ರಶಸ್ತಿಯು 2017ರ ಫೆಬ್ರವರಿಯಲ್ಲಿ ಲಾಸ್ ಏಂಜಲ್ಸ್'ನಲ್ಲಿ ನಡೆಯಲಿದೆ.