ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್’ಗೆ ನಿರಾಳ
ಧಾರ್ಮಿಕ ಭಾವನೆಗೆ ಧಕ್ಕೆ ತಂದ ಸಂಬಂಧ ‘ಒರು ಅಡಾರ್ ಲವ್’ ಚಿತ್ರ ತಂಡ ಹಾಗು ತಮ್ಮ ಮೇಲೆ ಹೂಡಿದ ಎಫ್ಐಆರ್ ರದ್ದು ಕೋರಿ ನಟಿ ಪ್ರಿಯಾ ಪ್ರಕಾಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಇಂದು ಸುಪ್ರಿಂಕೋರ್ಟ್ ತಡೆ ನೀಡಿದೆ.
ನವದೆಹಲಿ : ಧಾರ್ಮಿಕ ಭಾವನೆಗೆ ಧಕ್ಕೆ ತಂದ ಸಂಬಂಧ ‘ಒರು ಅಡಾರ್ ಲವ್’ ಚಿತ್ರ ತಂಡ ಹಾಗು ತಮ್ಮ ಮೇಲೆ ಹೂಡಿದ ಎಫ್ಐಆರ್ ರದ್ದು ಕೋರಿ ನಟಿ ಪ್ರಿಯಾ ಪ್ರಕಾಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಇಂದು ಸುಪ್ರಿಂಕೋರ್ಟ್ ತಡೆ ನೀಡಿದೆ.
ಇಂದು ಈ ಸಂಬಂಧ ವಿಚಾರಣೆ ನಡೆಯಬೇಕಿದ್ದು, ಹಾಡಿನ ಸಂಬಂಧದ ಎಲ್ಲಾ ಪ್ರಕರಣದ ವಿಚಾರಣೆಗೆ ಸದ್ಯಕ್ಕೆ ತಡೆ ನೀಡಲಾಗಿದೆ. ತಾತ್ಕಾಲಿಕವಾಗಿ ಇದರಿಂದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಸೇರಿ ಒರು ಅಡಾರ್ ಚಿತ್ರತಂಡಕ್ಕೆ ನಿರಾಳ ದೊರಕಿದೆ.