Asianet Suvarna News Asianet Suvarna News

ಕೈ ಶಾಸಕರ ಬಂಡಾಯ ಶಮನಕ್ಕೆ ಸಿದ್ದರಾಮಯ್ಯ ಸಿದ್ಧ ಸೂತ್ರ ರೆಡಿ

ಕಳೆದ ಹದಿನೈದು ದಿನಗಳಿಂದ ರಾಜ್ಯ ಕಾಂಗ್ರೆಸ್ ನಾಯಕ ಬಿಕ್ಕಟ್ಟು ಬಗೆಹರಿಯುತ್ತಿಲ್ಲ. ಅಂತಿಮವಾಗಿ ಅತೃಪ್ತ ಶಾಸಕರನ್ನ ತೃಪ್ತಿಪಡಿಸಲು ಕೈ ಹೊಸ ಸೂತ್ರ ಸಿದ್ಧಪಡಿಸಿದೆ.

Siddaramaiah New planed over Dissidence in Congress
Author
Bengaluru, First Published Sep 23, 2018, 4:57 PM IST


ಬೆಂಗಳೂರು, [ಸೆ.23]: ಕಳೆದ ಹದಿನೈದು ದಿನಗಳಿಂದ ರಾಜ್ಯ ಕಾಂಗ್ರೆಸ್ ನಾಯಕ ಬಿಕ್ಕಟ್ಟು ಬಗೆಹರಿಯುತ್ತಿಲ್ಲ. ಅಂತಿಮವಾಗಿ ಅತೃಪ್ತ ಶಾಸಕರನ್ನ ತೃಪ್ತಿಪಡಿಸಲು ಕೈ ಹೊಸ ಸೂತ್ರ ಸಿದ್ಧಪಡಿಸಿದೆ.

ಕಾಂಗ್ರೆಸ್ ನಲ್ಲಿ ಎದ್ದಿರುವ ಬಂಡಾಯ ಶಮನ ಮಾಡಲು ಸನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರ ಹೆಗಲಿಗೆ ವಹಿಸಲಾಗಿದೆ. ಹೀಗಾಗಿ ಅವರು ಅತೃಪ್ತರ ಬಂಡಾಯ ಶಮನಕ್ಕೆ ಕೆಲ ಸೂತ್ರಗಳನ್ನು ಸಿದ್ಧಪಡಿಸಿದ್ದು, ಆ ಸಿದ್ಧ ಸೂತ್ರಗಳನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ. 

ಸಿದ್ದು ರೆಡಿ ಮಾಡಿರುವ ಸೂತ್ರಗಳನ್ನು ಇಂದು ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಮುಂದೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಹಾಗಾದ್ರೆ ಏನದು ಸಿದ್ದರಾಮಯ್ಯ ಸಿದ್ಧ ಸೂತ್ರ ? 
*ಐದು ವರ್ಷ ಅಧಿಕಾರ ಅನುಭವಿಸಿದ ಸಚಿವರಿಗೆ ಕೋಕ್.
*ಹಿಂದಿನ ಸರ್ಕಾರದಲ್ಲಿ ಐದು ವರ್ಷ ಅಧಿಕಾರ ಅನುಭವಿಸಿದವರಿಗೆ ಕೋಕ್ ನೀಡಲು ಕೈ ಚಿಂತನೆ.
*ಹಿಂದಿನ ಐದು ವರ್ಷ ಹಾಗೂ ಮೈತ್ರಿ ಸರ್ಕಾರದಲ್ಲೂ ಮಂತ್ರಿ ಆದವರಿಗೆ ಕೋಕ್ ನೀಡಿ ಅತೃಪ್ತರಿಗೆ ಮಣೆ.
*ಅತೃಪ್ತರಲ್ಲಿ ಹಿರಿತನ, ಜಾತಿ, ಪ್ರಾದೇಶಿಕತೆ, ಪ್ರಭಾವ ಜೊತೆಗೆ ಲೋಕಸಭೆ ಚುನಾವಣೆಗೆ ಅನುಕೂಲವಾಗುವ ಶಾಸಕರಿಗೆ ಮಣೆ.
*ಸಂಪುಟ ವಿಸ್ತರಣೆ ವೇಳೆ ಕೆಲವರಿಗೆ ಕೋಕ್ ನೀಡಿ ಅತೃಪ್ತರ ಸೇರ್ಪಡೆ. 
*ಖಾಲಿ ಇರುವ 6 ಸ್ಥಾನ ಹಾಗೂ ನಾಲ್ವರನ್ನ ಸಂಪುಟದಿಂದ ಕೆಳಗಿಳಿಸಿ ಒಟ್ಟು 10 ಶಾಸಕರಿಗೆ ಸಚಿವ ಸ್ಥಾನ ನೀಡಲು ಪ್ಲಾನ್.

Follow Us:
Download App:
  • android
  • ios