ಕಳೆದ ಹದಿನೈದು ದಿನಗಳಿಂದ ರಾಜ್ಯ ಕಾಂಗ್ರೆಸ್ ನಾಯಕ ಬಿಕ್ಕಟ್ಟು ಬಗೆಹರಿಯುತ್ತಿಲ್ಲ. ಅಂತಿಮವಾಗಿ ಅತೃಪ್ತ ಶಾಸಕರನ್ನ ತೃಪ್ತಿಪಡಿಸಲು ಕೈ ಹೊಸ ಸೂತ್ರ ಸಿದ್ಧಪಡಿಸಿದೆ.


ಬೆಂಗಳೂರು, [ಸೆ.23]: ಕಳೆದ ಹದಿನೈದು ದಿನಗಳಿಂದ ರಾಜ್ಯ ಕಾಂಗ್ರೆಸ್ ನಾಯಕ ಬಿಕ್ಕಟ್ಟು ಬಗೆಹರಿಯುತ್ತಿಲ್ಲ. ಅಂತಿಮವಾಗಿ ಅತೃಪ್ತ ಶಾಸಕರನ್ನ ತೃಪ್ತಿಪಡಿಸಲು ಕೈ ಹೊಸ ಸೂತ್ರ ಸಿದ್ಧಪಡಿಸಿದೆ.

Add Asianetnews Kannada as a Preferred SourcegooglePreferred

ಕಾಂಗ್ರೆಸ್ ನಲ್ಲಿ ಎದ್ದಿರುವ ಬಂಡಾಯ ಶಮನ ಮಾಡಲು ಸನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರ ಹೆಗಲಿಗೆ ವಹಿಸಲಾಗಿದೆ. ಹೀಗಾಗಿ ಅವರು ಅತೃಪ್ತರ ಬಂಡಾಯ ಶಮನಕ್ಕೆ ಕೆಲ ಸೂತ್ರಗಳನ್ನು ಸಿದ್ಧಪಡಿಸಿದ್ದು, ಆ ಸಿದ್ಧ ಸೂತ್ರಗಳನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ. 

ಸಿದ್ದು ರೆಡಿ ಮಾಡಿರುವ ಸೂತ್ರಗಳನ್ನು ಇಂದು ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಮುಂದೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಹಾಗಾದ್ರೆ ಏನದು ಸಿದ್ದರಾಮಯ್ಯ ಸಿದ್ಧ ಸೂತ್ರ ? 
*ಐದು ವರ್ಷ ಅಧಿಕಾರ ಅನುಭವಿಸಿದ ಸಚಿವರಿಗೆ ಕೋಕ್.
*ಹಿಂದಿನ ಸರ್ಕಾರದಲ್ಲಿ ಐದು ವರ್ಷ ಅಧಿಕಾರ ಅನುಭವಿಸಿದವರಿಗೆ ಕೋಕ್ ನೀಡಲು ಕೈ ಚಿಂತನೆ.
*ಹಿಂದಿನ ಐದು ವರ್ಷ ಹಾಗೂ ಮೈತ್ರಿ ಸರ್ಕಾರದಲ್ಲೂ ಮಂತ್ರಿ ಆದವರಿಗೆ ಕೋಕ್ ನೀಡಿ ಅತೃಪ್ತರಿಗೆ ಮಣೆ.
*ಅತೃಪ್ತರಲ್ಲಿ ಹಿರಿತನ, ಜಾತಿ, ಪ್ರಾದೇಶಿಕತೆ, ಪ್ರಭಾವ ಜೊತೆಗೆ ಲೋಕಸಭೆ ಚುನಾವಣೆಗೆ ಅನುಕೂಲವಾಗುವ ಶಾಸಕರಿಗೆ ಮಣೆ.
*ಸಂಪುಟ ವಿಸ್ತರಣೆ ವೇಳೆ ಕೆಲವರಿಗೆ ಕೋಕ್ ನೀಡಿ ಅತೃಪ್ತರ ಸೇರ್ಪಡೆ. 
*ಖಾಲಿ ಇರುವ 6 ಸ್ಥಾನ ಹಾಗೂ ನಾಲ್ವರನ್ನ ಸಂಪುಟದಿಂದ ಕೆಳಗಿಳಿಸಿ ಒಟ್ಟು 10 ಶಾಸಕರಿಗೆ ಸಚಿವ ಸ್ಥಾನ ನೀಡಲು ಪ್ಲಾನ್.