ಖ್ಯಾತ ಸಿನಿಮಾವಿತರಕ ನಾಗ ಪ್ರಸಾದ್ ಇನ್ನಿಲ್ಲ | ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶ |
ಬೆಂಗಳೂರು (ಜ. 07): ಕನ್ನಡ ಸಿನಿಮಾ ಖ್ಯಾತ ವಿತರಕ ಹಾಗೂ ಫೈನಾನ್ಸಿಯರ್ ನಾಗ ಪ್ರಸಾದ್ ಇಂದು ಕೊನೆ ಉಸಿರೆಳೆದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚಿಂಗಾರಿ, ಗಾಡ್ ಫಾದರ್ ,ಭೀಮ ತೀರದಲ್ಲಿ ಹಾಗೂ ಚಂದ್ರ ಚಿತ್ರವನ್ನ ವಿತರಣೆ ಮಾಡಿದ್ದರು. ಜ್ವರ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪ್ರಸಾದ್ ಚಿಕಿತ್ಸೆ ಫಲಕಾರಿ ಆಗದೇ ನಿನ್ನೆ ರಾತ್ರಿ ಆಸ್ವತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಪ್ರಸಾದ್ ಅವರ ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದ್ದು ವಿಜಯನಗರದ ಪ್ರಸಾದ್ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ಸಿದ್ಧತೆ ಮಾಡಲಾಗಿದೆ.
