ಮೈಸೂರಿನಲ್ಲೊಬ್ಬ ರಾಜ್ ಅಭಿಮಾನಿ | ಮನೆಗೆ ಕಸ್ತೂರಿ ನಿವಾಸವೆಂದು ಹೆಸರಿಟ್ಟು ಅಭಿಮಾನ ಮೆರೆದ ಅಭಿಮಾನ | ಅಭಿಮಾನ ಕಂಡು ಬೆರಗಾದ ಪುನೀತ್ 

ವರನಟ ಡಾ. ರಾಜ್ ಕುಮಾರ್ ಅಭಿಮಾನಿಗಳನ್ನೇ ದೇವರೆಂದು ಕರೆದ ದೇವತಾ ಮನುಷ್ಯ. ಅಭಿಮಾನಿಗಳಿಗೂ ಅಷ್ಟೇ. ಅವರನ್ನು ದೇವರೆಂದೇ ಆರಾಧಿಸುತ್ತಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೈಸೂರಿನಲ್ಲಿ ಅವರ ಅಭಿಮಾನಿಯೊಬ್ಬರು ಡಾ. ರಾಜ್ ಖ್ಯಾತ ಸಿನಿಮಾ ಕಸ್ತೂರಿ ನಿವಾಸ ದ ಹೆಸರನ್ನು ತಮ್ಮ ಮನೆಗೆ ಇಟ್ಟಿದ್ದಾರೆ. ಅಷ್ಟೇ ಅಲ್ಲ. ಅವರ ಮನೆಯ ದೇವರ ಕೋಣೆ, ಮನೆ ಗೋಡೆ ತುಂಬೆಲ್ಲಾ ಅಣ್ಣಾವ್ರ ಫೋಟೋಗಳನ್ನು ಹಾಕಿಕೊಂಡಿದ್ದಾರೆ. 

View post on Instagram

 ಪುನೀತ್ ‘ಯುವರತ್ನ’ ಸಿನಿಮಾ ಶೂಟಿಂಗ್ ಗೆಂದು ಮೈಸೂರಿಗೆ ತೆರಳಿದ್ದರು. ಆಗ ಇವರ ಮನೆಗೆ ಭೇಟಿ ನೀಡಿದ್ದಾರೆ. ಅಣ್ಣಾವ್ರ ಮೇಲಿನ ಅಭಿಮಾನ ಕಂಡು ಖುಷಿಯಾಗಿದ್ದಾರೆ. 

ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ಸದಾ ಋಣಿ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.