ಮಂಗಳೂರಿನ ಉದಯೋನ್ಮುಖ ನಟಿಗೆ ಚಾನ್ಸ್​ ಕೊಡುಸ್ತಿನಿ ಎಂದು ನಂಬಿಸೋ ಪ್ರಯತ್ನ ಮಾಡಿದ್ದ. ಅದಲ್ಲದೆ ಚಾನ್ಸ್​ ಬೇಕಾದರೆ ನಿರ್ದೇಶಕ ನಿರ್ಮಾಪಕರ ಜೊತೆ ಮಲಗಬೇಕು ಎಂದು ಫೆಸ್​ಬುಕ್​ನಲ್ಲಿ ಅಶ್ಲೀಲವಾಗಿ ಮೆಸೇಜ್​ ಹಾಕಿದ್ದ

ಅಸಹ್ಯವಾಗಿ ಚಾಟ್​ ಮಾಡಿದ ಕಾರಣ ನಟಿಯೊಬ್ಬಳು ನಿರ್ದೇಶಕನಿಗೆ ತರಾಟೆಗೆ ತೆಗೆದುಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಈಗಷ್ಟೆ ಚಿತ್ರರಂಗಕ್ಕೆ ಬಂದಿದ್ದ ನಟಿಗೆ ಚಂದ್ರಕಾಂತ್​ ಸೊನ್ನದ್​ ಎಂಬ ವ್ಯಕ್ತಿ ಕಿರುಕುಳ ನೀಡಿದ್ದ . ಈತ ಸಾಕ್ಷ್ಯ ಚಿತ್ರಗಳನ್ನ ನಿರ್ಮಿಸುವುದಲ್ಲದೆ ಖಾಸಗಿ ಚಾನಲ್​ನಲ್ಲಿ ಉದ್ಯೋಗಿಯಾಗಿದ್ದಾನೆ.

ಮಂಗಳೂರಿನ ಉದಯೋನ್ಮುಖ ನಟಿಗೆ ಚಾನ್ಸ್​ ಕೊಡುಸ್ತಿನಿ ಎಂದು ನಂಬಿಸೋ ಪ್ರಯತ್ನ ಮಾಡಿದ್ದ. ಅದಲ್ಲದೆ ಚಾನ್ಸ್​ ಬೇಕಾದರೆ ನಿರ್ದೇಶಕ ನಿರ್ಮಾಪಕರ ಜೊತೆ ಮಲಗಬೇಕು ಎಂದು ಫೆಸ್​ಬುಕ್​ನಲ್ಲಿ ಅಶ್ಲೀಲವಾಗಿ ಮೆಸೇಜ್​ ಹಾಕಿದ್ದ . ಇನ್ನು ಇದೇ ಚಂದ್ರಕಾಂತ್​ ಸೊನ್ನದ್​ ಈ ಹಿಂದೆ ರಾಘವೇಶ್ವರ ಶ್ರೀ ಪ್ರಕರಣದಲ್ಲಿ ಪ್ರೇಮಲತಾ ಪರವಾಗಿ ಮಾತನಅಡಿ ಹೆಣ್ಣು ಮಕ್ಕಳ ಪರ ಇದ್ದೀನಿ ಎಂದು ಒಂದಷ್ಟು ಸಂದೇಶಗಳನ್ನ ಹಾಕಿದ್ದ . ಈಗ ಈ ಕಾಮುಕನ ಬಣ್ಣ ಬಯಲಾಗಿದೆ . ಸದ್ಯ ನಟಿ ವಾಣಿಜ್ಯ ಮಂಡಳಿಗೆ ದೂರು ನೀಡುವ ಸಾಧ್ಯತೆ ಇದೆ.