Asianet Suvarna News Asianet Suvarna News

ಆರ್‌ಆರ್‌ ನಗರ ಶಾಸಕ ಮುನಿರತ್ನಗೆ ಬಿಗ್ ರಿಲೀಫ್, ಯಾವ ಪ್ರಕರಣ ಖುಲಾಸೆ?

ಶಾಸಕ ಮುನಿರತ್ನ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ಮೇಲಿದ್ದ ಆರೋಪವೊಂದು ಸಾಕ್ಷಿ ಆಧಾರಗಳ ಕೊರತೆಯಿಂದ ಖುಲಾಸೆಯಾಗಿದೆ. 

poll code violation case Congress mla munirathna gets clean chit
Author
Bengaluru, First Published Jan 29, 2019, 8:16 PM IST

ಬೆಂಗಳೂರು[ಜ.29]  ಚುನಾವಣಾ ಅಕ್ರಮ ಆರೋಪ ಪ್ರಕರಣದಲ್ಲಿ ಸೂಕ್ತ ಸಾಕ್ಷಾಧಾರಗಳ ಕೊರತೆಯಿಂದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ವಿರುದ್ಧದ ಪ್ರಕರಣ  ಖುಲಾಸೆಯಾಗಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸೂಕ್ತ ಪುರಾವೆಗಳು ಸಿಗದ ಕಾರಣ ಕೇಸ್ ಖುಲಾಸೆಯಾಗಿದೆ. ಈ ಮೂಲಕ ಶಾಸಕ ಮುನಿರತ್ನಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

'ಕುರುಕ್ಷೇತ್ರ’ ತಡವಾಗಲು ನಿರ್ಮಾಪಕರು ಕೊಟ್ಟ 5 ಕಾರಣಗಳು

2013ರಲ್ಲಿ ಚುನಾವಣಾ ಅಕ್ರಮ ಎಸಗಿ ಚುನಾವಣಾ ಅಧಿಕಾರಿ ರವಿಕುಮಾರ್​​ಗೆ ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆಪ್ರಕರಣ ದಾಖಲಾಗಿತ್ತು. ಈಗ ಅಂತಿಮವಾಗಿ ಖುಲಾಸೆಯಾಗಿದೆ.

ಸಿನಿಮಾ ರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡು ನಂತರ ವರಾಜಕಾರಣಕ್ಕೆ ಬಂದ ಮುನಿರತ್ನ ಆರ್ ಆರ್‌ ನಗರದ ಶಾಸಕರಾಗಿ ಆಯ್ಕೆಯಾದರು. ಮುನಿರತ್ನ ನಿರ್ಮಾಣದ ಬಹು ನಿರೀಕ್ಷಿತ  ಚಿತ್ರ ಕುರುಕ್ಷೇತ್ರ ಬಿಡುಗಡೆಗೆ ಸಿದ್ಧವಾಗಿದೆ..

Follow Us:
Download App:
  • android
  • ios