Asianet Suvarna News Asianet Suvarna News

ಸ್ಮಶಾನದಲ್ಲಿ ಹೆಣ ಸುಡುವವನಿಗೆ ದರ್ಶನ್ ಸಹಾಯ ಮಾಡ್ತಾರಾ?

ವರ್ಷದಲ್ಲಿ ದಾಸ ಜನ ಸೇವೆ, ಪ್ರಾಣಿ ಸಹಾಯ ಎಂದೇ 1-2 ಕೋಟಿ ಖರ್ಚು ಮಾಡುತ್ತಾರೆ. ಈಗ ಸ್ಮಶಾನದಲ್ಲಿ ಸಾಯುವ ಹೆಣ ಸುಡುವ ವ್ಯಕ್ತಿಯೊಬ್ಬ ದರ್ಶನ್‌ಗೆ ಸಹಾಯ ಬೇಡಿ ಪತ್ರ ಬರೆದಿದ್ದಾರೆ.

Letter by Anthonyswamy to Darshan requesting help
Author
Bangalore, First Published May 13, 2019, 2:47 PM IST

ಬೆಂಗಳೂರಿನ ಕಲ್ಲಳ್ಳಿಯಲ್ಲಿರುವ ಸ್ಮಶಾನವನ್ನು 30 ವರ್ಷದಿಂದ ಕಾಯುತ್ತಿದ್ದ ಆಂಥೋನಿಸ್ವಾಮಿ ತಮ್ಮ ಮಗಳಿಂದ ದರ್ಶನ್‌ಗೆ ಸಹಾಯ ಪತ್ರ ಬರೆಸಿ ಅವರಿಗೆ ತಲುಪಿಸುವ ಪ್ರಯತ್ನದಲ್ಲಿದ್ದಾರೆ.

ಆಂಥೋನಿಸ್ವಾಮಿಗೆ ಹೆಣ ಸುಡುವ ಕೆಲಸ ಮಾಡುತ್ತಿರುವುದಕ್ಕೆ ಬಿಬಿಎಂಪಿ ಕಡೆಯಿಂದ ತಿಂಗಳಿಗೆ ಒಂದು ಸಾವಿರ ರೂಪಾಯಿ ಧನ ಸಹಾಯ ನೀಡಲಾಗುತ್ತಿತ್ತು. ಆದರೆ ಅದನ್ನು ಕಳೆದ 6-7 ವರ್ಷಗಳಿಂದ ಹಣವನ್ನೇ ನೀಡುತ್ತಿಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ ಹಾಗೂ ಊಟಕ್ಕೂ ಕೆಲವೊಮ್ಮೆ ಹಣವಿಲ್ಲದೇ ಪರದಾಡುತ್ತಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳಿಗೆ, ಶಾಸಕರಿಗೆ ಹಾಗೂ ಸಚಿವರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ.

ಹೊಟ್ಟೆಪಾಡಿಗೆ ಏನೋ ಮಾಡ್ಬೇಕಲ್ಲ, ಇಂದಿನಿಂದ ಕೆಲ್ಸ ಶುರು ಅಂದ ಡಿ-ಬಾಸ್!

ಈ ಹಿಂದೆ ಸಂಬಂಧಿಕರೊಬ್ಬರ ಕ್ರಿಯೆಗೆ ಸ್ಮಶಾನಕ್ಕೆ ಹೋಗಿದ್ದಾಗ ದರ್ಶನ್‌ನನ್ನು ಆಂಥೋನಿ ಮಾತನಾಡಿಸಿದ್ದರಂತೆ. ಅವರ ಕಷ್ಟಗಳನ್ನು ಕೇಳಿ ಹಣ ನೀಡಿ ಹೋಗಿದ್ದರಂತೆ. ಈಗ ಎದುರಾಗಿರುವ ಸಂಕಷ್ಟಕ್ಕೆ ದಾಸನೇ ದೇವರು ಎಂದು ಆಂಥೋನಿ ಕುಟುಂಬದವರು ನಂಬಿದ್ದಾರೆ.

 

Follow Us:
Download App:
  • android
  • ios