ಕುರುಕ್ಷೇತ್ರ ಟೀಸರ್ ರಿಲೀಸ್: ಕೊನೆಗೂ ರಿವೀಲ್ ಆಯ್ತು ಪಾತ್ರ ಪರಿಚಯ!
ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಹೈ ಬಜೆಟ್ ಚಿತ್ರ ‘ಕುರುಕ್ಷೇತ್ರ’. ಈ ಹಿಂದೆ ಎರಡು ಟೀಸರ್ ರಿಲೀಸ್ ಆಗಿತ್ತು. ಈಗ ಮೂರನೇ ಟೀಸರ್ ಮೂಲಕ ಪಾತ್ರಗಳ ಪರಿಚಯ ಸಿಕ್ಕಿದೆ.
ಮೊದಲೆರಡು ಟೀಸರ್ ಮೂಲಕ ದರ್ಶನ್-ದುರ್ಯೋಧನ ಹಾಗೂ ನಿಖಿಲ್-ಅಭಿಮನ್ಯು ಎಂದು ಮಾತ್ರ ತಿಳಿದಿತ್ತು. ಆದರೆ ಈಗ ಇನ್ನುಳಿದ ಪಾತ್ರಗಳು ಯಾರೆಂದು ತಿಳಿದಿದೆ. ಪಾತ್ರ ಪರಿಚಯ ಇಲ್ಲಿದೆ.
- ರವಿಚಂದ್ರನ್ (ಸಾರಥಿಯಾಗಿ ಕೃಷ್ಣ)
- ಅರ್ಜುನ್ ಸರ್ಜಾ( ಕರ್ಣ)
- ಅಂಬರೀಶ್ (ಭೀಷ್ಮ)
- ರವಿಶಂಕರ್ (ಶಕುನಿ)
- ಭಾರತಿ ವಿಷ್ಣುವರ್ಧನ್ (ಕುಂತಿ)
- ಶಶಿಕುಮಾರ್ (ಧರ್ಮರಾಯ)
ಈ ಚಿತ್ರಕ್ಕೆ ನಾಗಣ್ಣ ಆ್ಯಕ್ಷನ್ ಕಟ್ ಹೇಳಿದ್ದು ಮುನಿರತ್ನ ನಿರ್ಮಾಣ ಮಾಡಿದ್ದಾರೆ. ಇನ್ನು ಚಿತ್ರವನ್ನು ಅದ್ಧೂರಿಯಾಗಿ ಆಡಿಯೋ ರಿಲೀಸ್ ಮಾಡುವುದಾಗಿ ಚಿತ್ರತಂಡ ನಿರ್ಧಾರ ಮಾಡಿದ್ದು ಸಿನಿಮಾ ವರಮಹಾಲಕ್ಷ್ಮಿ ಹಬ್ಬದಂದು ರಿಲೀಸ್ ಆಗಲಿದೆ.