Asianet Suvarna News Asianet Suvarna News

ಕೊಡಗಿನ ಕೂಗಿಗೆ ಸ್ಪಂದಿಸಲು ನಟಿಯರ ಮನವಿ

ಕೊಡಗು ಜನರ ಕಣ್ಣಲ್ಲಿ ಈ ವರ್ಷದ ಮಳೆ ನೀರು ತರಿಸುತ್ತಲೇಇದೆ.  ಮಡಿಕೇರಿ, ಕುಶಾಲನಗರ, ನಾಪೋಕ್ಲು, ವಿರಾಜಪೇಟೆ, ಸೋಮವಾರಪೇಟೆ ಜನ ಹೈರಾಣವಾಗಿದ್ದಾರೆ. ಎಲ್ಲೆಲ್ಲೂ ನೀರು ತುಂಬಿದ್ದು ಸಹಾಯ ಹಸ್ತದ ಎದುರು ನೋಡುತ್ತಿದ್ದಾರೆ.

kannada-actress appeals-public-contribute-to-kodagu-flood-relief
Author
Bengaluru, First Published Aug 17, 2018, 9:56 PM IST | Last Updated Sep 9, 2018, 9:44 PM IST

ಮಡಿಕೇರಿ[ಆ.17] ಕೊಡಗಿನ ಜನರ ನೋವಿಗೆ ಸ್ಪಂದಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಮನವಿ ಮಾಡಿಕೊಂಡಿದ್ದರು.ಇದಾದ ಮೇಲೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಅಭಿಮಾನಿಗಳಿಗೆ ಕೊಡಗಿನ ಜನರ ನೆರವಿಗೆ ಧಾವಿಸಲು ಮನವಿ ಮಾಡಿಕೊಂಡಿದ್ದಾರೆ. ಡಾ.ರಾಜ್ ಕುಟುಂಬದ ವಿನಯ್ ರಾಜ್ ಕುಮಾರ್ ಸಹ ಕೇರಳದ ಜನರೊಂದಿಗೆ ನಿಲ್ಲೋಣ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಇನ್ನು ನಟಿಯರಾದ ಹರ್ಷಿಕಾ ಪೂಣಚ್ಚ, ರಶ್ಮಿಕಾ ಮಂದಣ್ಣ ಸಹ ಟ್ವಿಟರ್ ಮೂಲಕ ನೆರವಿಗೆ ಧಾವಿಸಲು ಕೇಳಿಕೊಂಡಿದ್ದಾರೆ. ಐಪಿಎಸ್ ಅಧಿಕಾರಿ ಡಿ.ರೂಪಾ ಟ್ವೀಟ್ ಮಾಡಿ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದು ಕೊಡಗಿನ ಜನರೆ ಎಚ್ಚರಿಕೆ, ಮನೆಯಿಂದ ಹೊರಗೆ ಬರಬೇಡಿ, ಸುರಕ್ಷಿತ ಜಾಗದಲ್ಲಿ ಇರುವುದನ್ನು ಸ್ಪಷ್ಟಪಡಿಸಿಕೊಳ್ಳಿ ಎಂದು ಹೇಳಿದ್ದಾರೆ.

ಸಹಾಯವಾಣಿ ಇಲ್ಲಿದೆ

 

Latest Videos
Follow Us:
Download App:
  • android
  • ios