Asianet Suvarna News Asianet Suvarna News

ಮಾಧುರಿ ದೀಕ್ಷಿತ್’ಗೆ ಧನ್ಯವಾದ ತಿಳಿಸಿದ ಜಾಹ್ನವಿ ಕಪೂರ್

ಕರಣ್  ಜೋಹಾರ್ ನಿರ್ಮಾಣ ಮಾಡುತ್ತಿರುವ  ಹೊಸ ಚಿತ್ರಕ್ಕೆ ಶ್ರೀ ದೇವಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಅವರ ಅಕಾಲಿಕ ನಿಧನದಿಂದ  ಆ ಚಿತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲದಲ್ಲಿಯೇ ಇದೀಗ  ಚಿತ್ರಕ್ಕೆ  ಮಾಧುರಿ ದೀಕ್ಷಿತ್ ಅವರು ಸಹಿ ಮಾಡಿದರು.

Janhvi Kapoor thanks Madhuri Dixit

ಮುಂಬೈ : ಕರಣ್  ಜೋಹಾರ್ ನಿರ್ಮಾಣ ಮಾಡುತ್ತಿರುವ  ಹೊಸ ಚಿತ್ರಕ್ಕೆ ಶ್ರೀ ದೇವಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಅವರ ಅಕಾಲಿಕ ನಿಧನದಿಂದ  ಆ ಚಿತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲದಲ್ಲಿಯೇ ಇದೀಗ  ಚಿತ್ರಕ್ಕೆ  ಮಾಧುರಿ ದೀಕ್ಷಿತ್ ಅವರು ಸಹಿ ಮಾಡಿದರು.

ಇದೀಗ ಶ್ರೀ ದೇವಿ ನಟಿಸಬೇಕಿದ್ದ ಜಾಗಕ್ಕೆ ಇದೀಗ ಮಾಧುರಿ ದೀಕ್ಷಿತ್ ಬಂದಿದ್ದು, ಮುಖ್ಯ ಪಾತ್ರವನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಶ್ರೀ ದೇವಿ ಪುತ್ರಿ ಜಾಹ್ನವಿ ಕಪೂರ್ ಮಾಧುರಿ ದೀಕ್ಷಿತ್’ಗೆ ಧನ್ಯವಾದವನ್ನು ತಿಳಿಸಿದ್ದಾರೆ. ತನ್ನ ಇನ್’ಸ್ಟಾಗ್ರಾಮಲ್ಲಿ ಬರೆದುಕೊಂಡ ಜಾಹ್ನವಿ ಕಪೂರ್ , ಅಭಿಷೇಕ್ ವರ್ಮನ್ ಅವರು ನಿರ್ದೇಶನ ಮಾಡುತ್ತಿದ್ದ  ಹೊಸ ಚಿತ್ರ ತಮ್ಮ ತಾಯಿಯ ಹೃದಯಕ್ಕೆ ಅತ್ಯಂತ ಹತ್ತಿರವಾಗಿತ್ತು. ಆದರೆ ಇದೀಗ  ಚಿತ್ರದ ಭಾಗವಾಗುತ್ತಿರುವುದಕ್ಕೆ ಮಾಧುರಿ ಜಿ ಅವರಿಗೆ ತಮ್ಮ ಹಾಗೂ ಖುಷಿ ಕಡೆಯಿಂದ ಧನ್ಯವಾದ ಎಂದು ಹೇಳಿದ್ದಾರೆ.

Follow Us:
Download App:
  • android
  • ios