ರಮೇಶ್ ಅರವಿಂದ್ ಸಾರಥ್ಯದಲ್ಲಿ ಸುವರ್ಣ ವಾಹಿನಿ ಕೋಟ್ಯಧಿಪತಿ ಕಾರ್ಯಕ್ರಮ ಆರಂಭಿಸಲಿರುವುದು ಜಗಜ್ಜಾಹೀರಾಗಿದೆ. ಇದೀಗ ಕೋಟ್ಯಧಿಪತಿ ಸ್ಪರ್ಧೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಸಾರ್ವಜನಿಕರಿಗೆ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡುವುದಕ್ಕೆಂದೇ ಸುವರ್ಣ ವಾಹಿನಿ ಯೋಜನೆಯೊಂದನ್ನು ಹಾಕಿಕೊಂಡಿದೆ.

ಬೆಂಗಳೂರು (ಮೇ. 07): ರಮೇಶ್ ಅರವಿಂದ್ ಸಾರಥ್ಯದಲ್ಲಿ ಸುವರ್ಣ ವಾಹಿನಿ ಕೋಟ್ಯಧಿಪತಿ ಕಾರ್ಯಕ್ರಮ ಆರಂಭಿಸಲಿರುವುದು ಜಗಜ್ಜಾಹೀರಾಗಿದೆ. ಇದೀಗ ಕೋಟ್ಯಧಿಪತಿ ಸ್ಪರ್ಧೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ.
ಸಾರ್ವಜನಿಕರಿಗೆ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡುವುದಕ್ಕೆಂದೇ ಸುವರ್ಣ ವಾಹಿನಿ ಯೋಜನೆಯೊಂದನ್ನು ಹಾಕಿಕೊಂಡಿದೆ.

Add Asianetnews Kannada as a Preferred SourcegooglePreferred

ಇಂದು ರಾತ್ರಿಯಿಂದ ಹತ್ತು ದಿನಗಳ ಕಾಲ ಪ್ರತಿರಾತ್ರಿ 7.30 ಕ್ಕೆ ಸಾರ್ವಜನಿಕರ ಮುಂದೆ ಪ್ರಶ್ನೆಯೊಂದನ್ನು ಇಡಲಾಗುತ್ತದೆ. ಆ ಪ್ರಶ್ನೆಗೆ ಸರಿಯಾದ ಉತ್ತರ ನೀಡುವ ಅದೃಷ್ಟವಂತರಿಗೆ ರಮೇಶ್ ಎದುರು ಹಾಟ್‌ಸೀಟಲ್ಲಿ ಕೂರುವ ಅವಕಾಶ ದೊರೆಯಲಿದೆ. ಎಸ್ಸೆಮ್ಮೆಸ್ ಅಥವಾ ದೂರವಾಣಿ ಕರೆ ಮಾಡಿ ಉತ್ತರಗಳನ್ನು ಸೂಚಿಸುವುದಕ್ಕೆ ಅವಕಾಶವಿದೆ.

KK<Space> ನಿಮ್ಮ ಉತ್ತರ A/B/C/D <Space ಗಂಡು/ಹೆಣ್ಣು/ಇತರ (M/F/O)<Space> ವಯಸ್ಸನ್ನು (ಉದಾ: 27) 57827 ಗೆ ಎಸ್ಎಂಎಸ್ ಕಳಿಸಬಹುದು ಅಥವಾ ನಿಮ್ಮ ಉತ್ತರ Option A ಆದಲ್ಲಿ 5057827-61ಕ್ಕೆ ಕರೆ ಮಾಡಿ, Option B ಆದಲ್ಲಿ 5057827 -62, Option C ಆದಲ್ಲಿ 5057827-63 Option D ಆದಲ್ಲಿ 5057827-64ಗೆ ಕರೆ ಮಾಡಬಹುದು.