ಬಿಗ್ಬಾಸ್ ಮನೆಗೂ ಐಟಿ ದಾಳಿಯಾಗುತ್ತಾ? ಸುದೀಪ್ ಹೇಳಿದ ಕತೆ!
ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಮಾತನಾಡಿದ್ರಾ? ಭಾನುವಾರದ ಸುಪರ್ ಸಂಡೆ ವಿತ್ ಸುದೀಪ ಕಾರ್ಯಕ್ರಮ ನೋಡಿದವರೆಲ್ಲ ಹೌದೌದು ಎನ್ನುತ್ತಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಮೋಡ ಕವಿದ ವಾತಾವರಣ ಆಗಿ 4 ಕಲಾವಿದರು ಒಂಥರಾ ರಜಾ ತಗೊಂಡಿದ್ದರು. ಕೆಲವರಿಗೆ ನಿನ್ನೆ ಮುಕ್ತಿಯಾದರೆ ಹಲವರಿಗೆ ಇಂದು ಮುಕ್ತಿಯಾಯಿತು. ಕೊಂಚ ಎಚ್ಚರ ತಪ್ಪಿದರೆ ನಿಮ್ಮನ್ನು ಕರೆಯೋಲೆ ಬರೋರೆ ಇರ್ತಿರಲಿಲ್ಲ.
ಚಿತ್ರರಂಗಕ್ಕೆ ಐಟಿ ಇಲಾಖೆ ಸ್ಪಷ್ಟ ಎಚ್ಚರಿಕೆ...ಮುಚ್ಚಿಟ್ರೆ ಹುಷಾರ್!
ಬಿಗ್ ಬಾಸ್ ಮನೆಯಲ್ಲಿ 74 ದಿನ ಕಳೆದು ಹೊರಬಂದ ಒಗ್ಗರಣೆ ಡಬ್ಬಿ ಮುರಳಿ ಅವರೊಂದಿಗೆ ಸುದೀಪ್ ಮಾತನಾಡುತ್ತಿದ್ದರು. ಈ ವೇಳೆ ಮುರುಳಿ 30 ಕೋಟಿ ವೆಚ್ಚದ ಕಾರ್ಯಕ್ರಮದಲ್ಲಿ ಭಾಗವಹಿಸಿರೋದು ಅಂದ್ರೆ ಸುಮ್ನೆನಾ ಅಂದ್ರು..... ಅದಕ್ಕೆ ಸುದೀಪ್ ಅಯ್ಯೋ ಅಂಗೆಲ್ಲ ಹೇಳ್ಬೇಡಿ, ಈಗಾಗಲೇ ಮನೆ ಹತ್ರ ಯಾರೋ ಬಂದಿದ್ರು, ಅಮೇಲೆ ಬಿಗ್ಬಾಸ್ ಮನೆಗೆ ಬಂದ್ಬಿಟ್ಟಾರು! ಎಂದು ಸುದೀಪ್ ಹೇಳಿದರು.