ನಟರನ್ನು ಮಂಚಕ್ಕೆ ಕರೆಯೋ ನಿರ್ದೇಶಕರಿದ್ದಾರೆ, ಬಾಲಿವುಡ್ ಯುವನಟ ಹೇಳಿದ ಸತ್ಯ!
ಸುಪ್ರೀಂ ಕೋರ್ಟ್ ಸೆಕ್ಷನ್ ಸಲಿಂಗ ಕಾಮ ಅಪರಾಧವಲ್ಲ ಎಂಬ ತೀರ್ಪು ನೀಡಿದ್ದು ಕಳೆದ ವಾರದ ದೊಡ್ಡ ಸುದ್ದಿ. ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಮಂಚ ಏರಬೇಕು ಎಂದು ನಟಿಯರು ಆರೋಪ ಮಾಡುತ್ತಿದ್ದಾರೆ. ಈ ನಡುವೆ ನಟ ಪ್ರಖ್ಯಾತ ನಟ ಸಹ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ. ಏನಿದು ಸುದ್ದಿ?
ಮುಂಬೈ(ಸೆ.17) ಈಗಾಗಲೇ ಸಾಕಷ್ಟು ನಟಿಯರು ಚಿತ್ರರಂಗದಲ್ಲಿಯ ಕಾಸ್ಟಿಂಗ್ ಕೌಚ್ ಹಾಗೂ ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಎಲ್ಲರೆದುರೆ ಹೇಳಿಕೊಂಡಿದ್ದಾರೆ. ಈಗ ಯುವ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ, ತಾವು ಎದುರಿಸಿದ್ದ ಕರಾಳ ಅನುಭವ ಹೇಳಿದ್ದಾರೆ.
ಕೇವಲ ನಟಿಯರಿಗೆ ಮಾತ್ರವಲ್ಲ, ನಟರಿಗೂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಸಂದರ್ಭ ಎದುರಾಗಬಹುದು ಎಂಬುದನ್ನು ಈ ಪ್ರಕರಣ ಸಾಬೀತು ಮಾಡಿದೆ. ಹಾಗಾದರೆ ಆಯಷ್ಮಾನ್ ಹೇಳಿದ್ದೇನು? ಇಲ್ಲಿದೆ ಉತ್ತರ.
ಆಯುಷ್ಮಾನ್ ಖುರಾನಾ, ಆಡಿಷನ್ಗೆ ತೆರಳಿದ್ದರಂತೆ. ಈ ವೇಳೆ ನಿರ್ದೇಶಕನೊಬ್ಬ ಇವರ ಜತೆ ಅಶ್ಲೀಲತೆಯಿಂದ ಮಾತಾಡಿಸಿದ್ದಲ್ಲದೇ, ಇವರ ಪ್ರೈವೆಟ್ ಪಾರ್ಟ್ನ್ನು ತೋರಿಸುವಂತೆ ಕೇಳಿಕೊಂಡಿದ್ದರಂತೆ. ಇದರಿಂದ ತೀವ್ರ ಮುಜುಗರಕ್ಕೆಗುರಿಯಾದ ನಾನು ಅಲ್ಲಿಂದ ಹಿಂದಕ್ಕೆ ಬಂದೆ ಎಂದು ಬಾಲಿವುಡ್ ನಟ ಹೇಳಿದ್ದಾರೆ. ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಆತಂಕಕಾರಿ ಮಾಹಿತಿಯನ್ನು ಖುರಾನಾ ಹೊರಹಾಕಿದ್ದಾರೆ.