ರೆಬೆಲ್ ಸ್ಟಾರ್‌ನನ್ನು ಕಳೆದುಕೊಂಡ ಸ್ಯಾಂಡಲ್‌ವುಡ್ ಅನಾಥವಾಗಿದೆ. ಸ್ಟಾರ್ಸ್‌ಗೆ ಈ ನೋವು ಮರೆಯಲಿನ್ನೂ ಸಾಧ್ಯವಾಗಿಲ್ಲ. ಆ ಕಾರಣಕ್ಕಾಗಿಯೇ ಎಲ್ಲರೂ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ....!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರೆಬೆಲ್ ಸ್ಟಾರ್ ಇಲ್ಲದೇ ಸ್ಯಾಂಡಲ್‌ವುಡ್ ಮಂಕಾಗಿದೆ. ಯಾವ ಸ್ಟಾರ್ ನಟ-ನಟಿಯರಿಗೂ ಸಂಭ್ರಮವೇ ಇಲ್ಲ. ಅದರಲ್ಲೂ ಅಂಬರೀಷ್‌ಗೆ ಮಗನಂತಿದ್ದ ದರ್ಶನ್ ಪ್ರೀತಿಯ ಅಪ್ಪಾಜಿಯನ್ನು ಕಳೆದುಕೊಂಡ ದುಃಖದಲ್ಲಿಯೇ ಇನ್ನೂ ಇದ್ದಾರೆ. ಅಭಿಮಾನಿಗಳಿಗೊಂದು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಏನದು?

ಆ ಪತ್ರದ ಮಧ್ಯದಲ್ಲಿ ದರ್ಶನ್ ಮುಖವಿದ್ದು, ಅಕ್ಕಪಕ್ಕದಲ್ಲಿ ತಂದೆ ತೂಗೂದೀಪ್ ಹಾಗೂ ಅಂಬರೀಷ್ ಫೋಟೋಗಳನ್ನು ಲಗತ್ತಿಸಲಾಗಿದೆ.

ಜನವರಿ 8 ರಂದು ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಹುಟ್ಟು ಹಬ್ಬವಿತ್ತು. ಅಂಬಿಯಣ್ಣನಿಲ್ಲದ ಕಾರಣ ಬರ್ತ್‌ ಡೇ ಸೆಲೆಬ್ರೇಷನ್‌ನಿಂದ ದೂರವೇ ಉಳಿದಿದ್ದರು ರಾಕಿಂಗ್ ಸ್ಟಾರ್. ಅಭಿಮಾನಿಗಳಿಗೆ ನಾನು ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳುವ ಸಂಭ್ರಮದಲ್ಲಿಲ್ಲ ಎಂಬುದನ್ನು ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟವಾಗಿ ತಿಳಿ ಹೇಳಿದ್ದರು. ಆದರೂ, ಅಭಿಮಾನಿಯೊಬ್ಬ ತನ್ನ ಫೇವರೇಟ್ ನಟನಿಗೆ ಹುಟ್ಟು ಹಬ್ಬದ ವಿಶ್ ಮಾಡ್ಲಿಕ್ಕೆ ಆಗ್ಲಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು ದುರಂತ.

ಅಂಬಿ ಅಭಿಮಾನಿಗಳಿಗೆ ದರ್ಶನ್ ಕೊಟ್ರು ಶಾಕ್!