ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದೆ.

ಬೆಂಗಳೂರು(ಅ.28): ನಿರ್ದೇಶಕ ಟಿ.ಎಸ್. ನಾಗಾಭರಣ ಹೊಸ ಸಿನಿಮಾ ಶುರು ಮಾಡಿದ್ದಾರೆ. ಅದರ ಹೆಸರು ‘ಕಾನೂರಾಯಣ’. ಈ ಹಿಂದೆ ನಿರ್ದೇಶಕ ಪವನ್‌ಕುಮಾರ್ ಕ್ರೌಡ್ ಫಂಡಿಂಗ್ ಮೂಲಕ ‘ಲೂಸಿಯಾ’ ಸಿನಿಮಾ ನಿರ್ದೇಶಿಸಿದ್ದರು. ಅದೇ ಥರ ನಾಗಾಭರಣರ ಹೊಸ ಸಿನಿಮಾಗೆ 20 ಲಕ್ಷ ಮಂದಿ ಹಣ ಹೂಡಲಿದ್ದಾರಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ಒಕ್ಕೂಟ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ‘ಯೋಜನೆಯ ಸುಮಾರು 20 ಲಕ್ಷ ಸದಸ್ಯರು ತಲಾ 20 ರೂ.ನಂತೆ ಹಣ ಸಂಗ್ರಹಿಸಿ ನೀಡಿದ್ದಾರೆ. ಒಟ್ಟಾರೆ 5 ಕೋಟಿ ರೂ. ಸಂಗ್ರಹ ನಿರೀಕ್ಷೆ ಇದೆ’ ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ನಟ ಸ್ಕಂದ, ಸೋನುಗೌಡ, ಜಾನ್ವಿ ಜ್ಯೋತಿ, ದೊಡ್ಡಣ್ಣ, ಸುಂದರ್‌ರಾಜ್, ಗಿರಿಜಾ ಲೋಕೇಶ್ ನಟಿಸಲಿದ್ದಾರೆ.