ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಮಾತ್ರ ಅಲ್ಲ ಕರ್ನಾಟಕದ ಬಾಗಲಕೋಟೆಯಿಂದಲೂ ಸ್ಪರ್ಧೆ ಮಾಡಲಿದ್ದಾರೆಯೇ? ಇಂಥ ಸುದ್ದಿಯೊಂದು ಬಂದಿದೆ.. ಆದರೆ ಇದು ವ್ಯಕ್ತಿಯೊಬ್ಬರ ಮನವಿ.

ಬಾಗಲಕೋಟೆ [ಮಾ. 15] ಬಾಗಲಕೋಟೆಯಿಂದ ಸ್ಫಧೆ೯ ಮಾಡುವಂತೆ ಸಿದ್ದರಾಮಯ್ಯ ಮತಕ್ಷೇತ್ರದ ಯುವಕ ಪ್ರಧಾನಿ‌ ಮೋದಿ ಅವರನ್ನು ವಿನಂತಿಸಿಕೊಂಡಿದ್ದಾರೆ. ಬಾಗಲಕೋಟೆ ಲೋಕಸಭಾ ಮತಕ್ಷೇತ್ರದಿಂದ ಸ್ಫಧೆ೯ ಮಾಡುವಂತೆ ಇಷ್ಟಲಿಂಗ ನರೇಗಲ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೋಕಸಭಾ ಚುನಾವಣೆ: ಡಿ.ಕೆ. ಶಿವಕುಮಾರ್ ಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು..!

ಬಾಗಲಕೋಟೆ ಜಿಲ್ಲೆಯ ಬಾದಾಮಿಯ ನಿವಾಸಿ ಇಷ್ಟಲಿಂಗ ಟ್ವೀಟ್ ಮಾಡಿದ್ದು, ಉತ್ತರ ಭಾರತದ ಜೊತೆಗೆ ದಕ್ಷಿಣ ಭಾರತದಲ್ಲೂ ಪ್ರಧಾನಿ ಮೋದಿ ಸ್ಫಧೆ೯ ಮಾಡಲಿ ಈ ಮೂಲಕ ದಕ್ಷಿಣ ಭಾರತದ ಮೋದಿಯವರ ಅಭಿಮಾನಿಗಳಿಗೆ ಚೈತನ್ಯದ ಜೊತೆಗೆ ಇನ್ನಷ್ಟು ಬಲ ಸಿಗಲಿದೆ. ಹೀಗಾಗಿ ಬಾಗಲಕೋಟೆಯಿಂದ ಮೋದಿಯವರು ಸ್ಫಧೆ೯ ಮಾಡಲಿ ಎಂದು ಕೇಳಿಕೊಂಡಿದ್ದಾರೆ.