ದುಷ್ಮನಿ ಜಮ್ ಕರ್ ಕರೋ..: ದೀದಿಗೆ ಸೂಕ್ಷ್ಮತೆ ಹೇಳಿಕೊಟ್ಟ ಸುಷ್ಮಾ!
ಮೋದಿ ಪ್ರಜಾಪ್ರಭುತ್ವಕ್ಕೆ ಮಾಡಿದ ಕಪಾಳಮೋಕ್ಷ ಎಂದ ದೀದಿ| ಎಲ್ಲೆ ಮೀರಿ ಮಾತನಾಡಬೇಡಿ ಎಂದು ಸುಷ್ಮಾ ಸ್ವರಾಜ್ ಎಚ್ಚರಿಕೆ| ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಸುಷ್ಮಾ ಸೂಕ್ಷ್ಮತೆ ಪಾಠ| ಗೆಳೆರಾದರೆ ಮುಜುಗರವಾಗಬಾರದು ದೀದಿ ಎಂದ ಸುಷ್ಮಾ|
ನವದೆಹಲಿ(ಮೇ.08): ಪ್ರಧಾನಿ ನರೇಂದ್ರ ಮೋದಿ ‘ಪ್ರಜಾಪ್ರಭುತ್ವಕ್ಕೆ ಮಾಡಿದ ಕಪಾಳಮೋಕ್ಷ’ ಎಂದು ಹೇಳಿದ್ದ ಪ.ಬಾಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ, ಸುಷ್ಮಾ ಸ್ವರಾಜ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಮಮತಾ ಬ್ಯಾನರ್ಜಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಸುಷ್ಮಾ, ಓರ್ವ ಮುಖ್ಯಮಂತ್ರಿಯಾಗಿ ಮಮತಾ ತಮ್ಮ ಎಲ್ಲೆಯನ್ನು ಮೀರಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುಷ್ಮಾ, ‘ನೀವು ಎಲ್ಲೆ ಮೀರಿ ಮಾತನಾಡುತ್ತಿದ್ದು, ಭವಿಷ್ಯದಲ್ಲಿ ರಾಜ್ಯದ ಬೇಕು ಬೇಡಗಳಿಗಾಗಿ ನೀವು ಮೋದಿ ಅವರೊಂದಿಗೆ ಮಾತನಾಡಲೇಬೇಕು ಎಂಬುದನ್ನು ನೆನಪಿಡಿ..’ಎಂದು ಎಚ್ಚರಿಸಿದ್ದಾರೆ.
ममता जी - आज आपने सारी हदें पार कर दीं. आप प्रदेश की मुख्यमंत्री हैं और मोदी जी देश के प्रधान मंत्री हैं. कल आपको उन्हीं से बात करनी है. इसलिए बशीर बद्र का एक शेर याद दिला रही हूँ :
— Chowkidar Sushma Swaraj (@SushmaSwaraj) May 7, 2019
दुश्मनी जम कर करो लेकिन ये गुंजाइश रहे,
जब कभी हम दोस्त हो जाएँ तो शर्मिंदा न हों.
ತಮ್ಮ ಟ್ವಿಟ್ನಲ್ಲಿ ಬಶೀರ್ ಭದ್ರ ಅವರ ಶಾಯರಿಯನ್ನು ಉಲ್ಲೇಖಿಸಿರುವ ಸುಷ್ಮಾ, ‘ಹಗತೆನ ಮಾಡಿ ಆದರೆ ನಾಳೆ ಒಂದು ವೇಳೆ ನಾವು ಗೆಳೆಯರಾದರೆ ಮುಜುಗರವಾಗಬಾರದು..’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಲೋಕಸಭೆ ಚುನಾವಣೆಗಾಗಿ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ