ಹೋಗಯಾ, ಹೋಗಯಾ: ಪ್ರಚಾರದಲ್ಲಿ ಸ್ಮೃತಿ ಇರಾನಿಗೆ ಕ್ಯಾ ಹೋಗಯಾ?
ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕಿ ಸ್ಮೃತಿ ಇರಾನಿಗೆ ಮುಖಭಂಗ| ಚುನಾವಣಾ ಭಾಷಣದಲ್ಲಿ ಯಡವಟ್ಟು ಮಾಡಿಕೊಂಡ ಸ್ಮೃತಿ ಇರಾನಿ| ರಾಜ್ಯದಲ್ಲಿ ರೈತರ ಸಾಲಮನ್ನಾ ಆಗಿದೆಯಾ ಎಂದು ಕೇಳಿದ ಸ್ಮೃತಿ| ಆಗಿದೆ ಎಂದು ಉತ್ತರಿಸಿದ ಜನಸ್ತೋಮ| ಜನರ ಉತ್ತರ ಕೇಳಿ ತಡವರಿಸಿದ ಬಿಜೆಪಿ ನಾಯಕಿ|
ಭೋಪಾಲ್(ಮೇ.09): ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸ್ಮೃತಿ ಇರಾನಿಗೆ ಸಾರ್ವಜನಿಕ ಸಭೆಯಲ್ಲಿ ತೀವ್ರ ಮುಖಭಂಗವಾಗಿದೆ. ತಮ್ಮ ಭಾಷಣದಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಹೊಗಿ ಸ್ಮೃತಿ ಇರಾನಿ ಯಡವಟ್ಟು ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲಮನ್ನಾ ಆಗಿದೆಯೇ ಎಂದು ಜನರನ್ನು ಸ್ಮೃತಿ ಪ್ರಶ್ನಿಸಿದರು.
स्मृति ईरानी की हुई किरकिरी :
— MP Congress (@INCMP) May 8, 2019
स्मृति ईरानी ने मप्र के अशोकनगर में मंच से पूछा क्या किसानों का कर्जा माफ हुआ है ? तो सभा के बीच में किसानों ने चिल्ला कर बताया “हां हुआ है, हां हुआ है, हाँ हो गया है”।
—अब जनता भी इन झूठों को सीधे जवाब देने लगी है।
“अब तो झूठ फैलाने से बाज़ आओ” pic.twitter.com/N9g64K7xAC
ಇದಕ್ಕೆ ಉತ್ತರವಾಗಿ ನೆರೆದ ಜನಸ್ತೋಮ ಹೋಗಯಾ, ಹೋಗಯಾ..(ಆಗಿದೆ, ಆಗಿದೆ) ಎಂದು ಕೂಗಿದೆ. ಇದರಿಂದ ಕೊಂಚ ಗಲಿಬಿಲಿಗೊಂಡ ಸ್ಮೃತಿ ಇರಾನಿ, ತಡವರಿಸಿಕೊಂಡು ನಂತರ ಮಾತು ಮುಂದುವರೆಸಿದರು.
ಸ್ಮೃತಿ ಇರಾನಿ ಪೇಚಿಗೆ ಸಿಲುಕಿದ ಪ್ರಸಂಗದ ವಿಡಿಯೋವನ್ನು ಮಧ್ಯಪ್ರದೇಶ ಕಾಂಗ್ರೆಸ್ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದು, ಜನತೆ ಈ ಸುಳ್ಳುಗಾರರಿಗೆ ದಿಟ್ಟ ಉತ್ತರ ನೀಡಲು ಪ್ರಾರಂಭಿಸಿದ್ದಾರೆ ಎಂದು ಹೇಳಿದೆ.
ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ