Asianet Suvarna News Asianet Suvarna News

ಕರ್ನಾಟಕದಿಂದ ಸ್ಪರ್ಧಿಸ್ತಾರಾ ರಾಹುಲ್..? ರಾಜಕೀಯ ಸಂಚಲನ ಮೂಡಿಸಿದ ಸಿದ್ದು ಟ್ವೀಟ್..!

ಲೋಕಸಮರದಲ್ಲಿ ದಿನಕ್ಕೊಂದು ಹೊಸ ತಿರುವು | ಕರ್ನಾಟಕದಿಂದ ರಾಹುಲ್ ಸ್ಪರ್ಧಿಸಲು ಸಿದ್ದು ಟ್ವೀಟ್ | ಕರ್ನಾಟಕಕ್ಕೆ ಬರ್ತಾರಾ ರಾಹುಲ್..? ಸಿದ್ದರಾಮಯ್ಯ ಟ್ವೀಟ್ ಬೆನ್ನಲ್ಲೇ ರಾಜಕೀಯ ಸಂಚಲನ.

Siddaramaiah Wants Rahul Gandhi to Contest Loksabha Polls From Karnataka
Author
Bengaluru, First Published Mar 15, 2019, 10:26 PM IST

ಬೆಂಗಳೂರು, (ಮಾ.15): ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವೇರಿದೆ.ಯಾರು ಎಲ್ಲಿ ಸ್ಪರ್ಧೆ ಮಾಡ್ತಾರೆ ಅನ್ನೋ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಈ ಮಧ್ಯೆ ಎಐಸಿಸಿ ಅಧ್ಯಕ್ಷ  ರಾಹುಲ್ ಗಾಂಧಿ ಕರ್ನಾಟದಿಂದ ಸ್ಪರ್ಧಿಸ್ತಾರಾ ಅನ್ನೋ ಅನುಮಾನ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಮಾಡಿದ ಟ್ವೀಟ್. ಹೌದು... ಕರ್ನಾಟಕದಲ್ಲಿ ಸ್ಪರ್ಧಿಸಿದ್ರೆ ರಾಹುಲ್ ಗೆ ಸ್ವಾಗತ ಎಂಬ ಸಿದ್ದು ಟ್ವೀಟ್ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಅಷ್ಟಕ್ಕೂ ಈ ಹಿಂದೆ ಬಳ್ಳಾರಿಯಿಂದ ಸೋನಿಯಾ, ಚಿಕ್ಕಮಗಳೂರಿನಿಂದ ಇಂದಿರಾ ಸ್ಪರ್ಧಿಸಿ ಗೆದ್ದಿದ್ದರು. ಹಾಗಾಗಿ ರಾಹುಲ್ ಕರ್ನಾಟಕ ಸ್ಪರ್ಧೆ ಊಹಾಪೋಹ ಅಲ್ಲಗಳೆಯುವಂತೆಯೂ ಇಲ್ಲ.

ಈಗಾಗಲೇ ರಾಹುಲ್ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಆದ್ರೆ ಸಿದ್ದರಾಮಯ್ಯ ಅವರು ಮಾಡಿರುವ ಈ ಟ್ವೀಟ್ ಹಲವು ಆಯಾಮಾಗಳಿಗೆ ದಾರಿ ಮಾಡಿಕೊಟ್ಟಿದಂತೂ ಸತ್ಯ.

Follow Us:
Download App:
  • android
  • ios