ಕರ್ನಾಟಕದಿಂದ ಸ್ಪರ್ಧಿಸ್ತಾರಾ ರಾಹುಲ್..? ರಾಜಕೀಯ ಸಂಚಲನ ಮೂಡಿಸಿದ ಸಿದ್ದು ಟ್ವೀಟ್..!
ಲೋಕಸಮರದಲ್ಲಿ ದಿನಕ್ಕೊಂದು ಹೊಸ ತಿರುವು | ಕರ್ನಾಟಕದಿಂದ ರಾಹುಲ್ ಸ್ಪರ್ಧಿಸಲು ಸಿದ್ದು ಟ್ವೀಟ್ | ಕರ್ನಾಟಕಕ್ಕೆ ಬರ್ತಾರಾ ರಾಹುಲ್..? ಸಿದ್ದರಾಮಯ್ಯ ಟ್ವೀಟ್ ಬೆನ್ನಲ್ಲೇ ರಾಜಕೀಯ ಸಂಚಲನ.
ಬೆಂಗಳೂರು, (ಮಾ.15): ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವೇರಿದೆ.ಯಾರು ಎಲ್ಲಿ ಸ್ಪರ್ಧೆ ಮಾಡ್ತಾರೆ ಅನ್ನೋ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಈ ಮಧ್ಯೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟದಿಂದ ಸ್ಪರ್ಧಿಸ್ತಾರಾ ಅನ್ನೋ ಅನುಮಾನ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಮಾಡಿದ ಟ್ವೀಟ್. ಹೌದು... ಕರ್ನಾಟಕದಲ್ಲಿ ಸ್ಪರ್ಧಿಸಿದ್ರೆ ರಾಹುಲ್ ಗೆ ಸ್ವಾಗತ ಎಂಬ ಸಿದ್ದು ಟ್ವೀಟ್ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
Karnataka has always supported & encouraged @INCIndia leaders. It has been proved in case of Smt. Indira ji & Smt. Sonia ji.
— Siddaramaiah (@siddaramaiah) March 15, 2019
We also want our next Prime Minister of India Shri. @RahulGandhi to contest from Karnataka & herald new developmental paradigm.#RaGaFromKarnataka
ಅಷ್ಟಕ್ಕೂ ಈ ಹಿಂದೆ ಬಳ್ಳಾರಿಯಿಂದ ಸೋನಿಯಾ, ಚಿಕ್ಕಮಗಳೂರಿನಿಂದ ಇಂದಿರಾ ಸ್ಪರ್ಧಿಸಿ ಗೆದ್ದಿದ್ದರು. ಹಾಗಾಗಿ ರಾಹುಲ್ ಕರ್ನಾಟಕ ಸ್ಪರ್ಧೆ ಊಹಾಪೋಹ ಅಲ್ಲಗಳೆಯುವಂತೆಯೂ ಇಲ್ಲ.
ಈಗಾಗಲೇ ರಾಹುಲ್ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಆದ್ರೆ ಸಿದ್ದರಾಮಯ್ಯ ಅವರು ಮಾಡಿರುವ ಈ ಟ್ವೀಟ್ ಹಲವು ಆಯಾಮಾಗಳಿಗೆ ದಾರಿ ಮಾಡಿಕೊಟ್ಟಿದಂತೂ ಸತ್ಯ.