ದಶಕದ ಬಳಿಕ ಒಂದಾದ ಸಿದ್ದು, ಜಿಟಿಡಿ!: ಮೈಸೂರಲ್ಲಿ ಹಳೇ ದೋಸ್ತಿಗಳ ಅಬ್ಬರ!
ಮೈತ್ರಿ ಧರ್ಮ ಪರಿಪಾಲನೆಗೆ ದಶಕದಿಂದ ದೂರವಿದ್ದ ಹಳೇ ದೋಸ್ತಿಗಳು ಮತ್ತೆ ಒಂದಾಗಿದ್ದಾರೆ. ಈ ಮೂಲಕ ಮೈಸೂರು ಕೊಡಗು ಮೈತ್ರಿ ಅಭ್ಯರ್ಥಿ ಪರ ಒಟ್ಟಾಗಿ ಮತಯಾಚನೆ ಮಾಡಿದ್ದಾರೆ.
ಮೈಸೂರು[ಏ.15]: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಸ್ಪರ ಎದುರಾಳಿಗಳಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಿ.ಟಿ.ದೇವೇಗೌಡ ದಶಕಗಳ ನಂತರ ಒಂದಾಗಿ ಭಾನುವಾರ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಪರವಾಗಿ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜಕೀಯ ಎಂಬುದು ಗಣಿತ ಅಲ್ಲ, ಅದೊಂದು ಕೆಮಿಸ್ಟ್ರಿ. 2 ಮತ್ತು 2 ಸೇರಿ 4 ಆಗಲ್ಲ. 2 ಪ್ಲಸ್ ಎಷ್ಟುಬೇಕಾದರೂ ಆಗಬಹುದು. ರಾಜಕೀಯದಲ್ಲಿ ಯಾರೂ ಪರ್ಮನೆಂಟ್ ಸ್ನೇಹಿತರು ಇರೋಲ್ಲ, ಪರ್ಮನೆಂಟ್ ವೈರಿಗಳೂ ಇರಲ್ಲ ಎಂದರು.
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಗಳಲ್ಲಿ ಸಚಿವರಾದ ಜಿ.ಟಿ.ದೇವೇಗೌಡ ಅವರೊಂದಿಗೆ ಭಾಗವಹಿಸಿದೆ.
— Siddaramaiah (@siddaramaiah) April 14, 2019
ಸಂಸದರಾದ ಪ್ರತಾಪ್ ಸಿಂಹ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟು ಕೇವಲ ಗಲಭೆ, ಭಾಷಣಗಳಲ್ಲೇ ೫ ವರ್ಷ ಪೂರೈಸಿದ್ದು, ಇದರಿಂದ ಜನ ನೊಂದಿದ್ದಾರೆ. ಹಾಗಾಗಿ ಈ ಬಾರಿ ಗೆಲುವು ನಮ್ಮದೆ. pic.twitter.com/WoGol3bRrJ
ನಾನು ಜಿ.ಟಿ. ದೇವೇಗೌಡ ಒಟ್ಟಿಗೆ ಪ್ರಚಾರಕ್ಕೆ ಹೋಗದಿದ್ದರೆ ಗೊಂದಲ ಏರ್ಪಡುತ್ತದೆ. ಅದು ಹಾಗೆಯೇ ಉಳಿಯುತ್ತದೆ ಎಂಬ ಕಾರಣಕ್ಕೆ ಒಗ್ಗಟ್ಟಾಗಿ ಬಂದಿದ್ದೇವೆ. ನಾನು ಜಿ.ಟಿ.ದೇವೇಗೌಡಗೆ ಹೇಳಿದ್ದೆ. ನಾನು ಬರ್ತೀನಿ, ನೀನು ಬಾ ಎಂದಿದ್ದೆ. ನಾವಿಬ್ಬರೂ ಬೆಂಗಳೂರಿನಲ್ಲಿ ಸಭೆ ಮಾಡಿದ್ದೆವು ಎಂದು ಹೇಳಿದರು.