Asianet Suvarna News Asianet Suvarna News

ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಲೋಕಸಭಾ ಅಖಾಡಕ್ಕಿಳಿದ ತಂದೆ

ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಶಾಮನೂರು ಶಿವಶಂಕರಪ್ಪ ಲೋಕಸಭಾ ಅಖಾಡಕ್ಕಿಳಿದಿದ್ದಾರೆ. ಅರೇ....ಅದು ಹೇಗಂತೀರಾ ಮುಂದೆ ಓದಿ..

Shamanuru shivashankarappa Contesting From Davanagere Poll For Help son political future
Author
Bengaluru, First Published Mar 24, 2019, 4:07 PM IST

ದಾವಣಗೆರೆ, (ಮಾ.24): ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಶಾಮನೂರು ತಮ್ಮ ಪುತ್ರನಿಗೆ ಹೊಸ ರಾಜಕೀಯ ಭವಿಷ್ಯ ನೀಡಲು ಮುಂದಾಗಿದ್ದಾರೆ. 

ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸತತ ಮೂರು ಬಾರಿ ಸೋಲು ಕಂಡಿದ್ದ ಎಸ್. ಎಸ್. ಮಲ್ಲಿಕಾರ್ಜುನ್ ಈ ಬಾರಿ ಲೋಕಸಭಾ ಚುನಾವಣಾ ಕಣದಿಂದ ದೂರ ಸರಿದಿದ್ದಾರೆ. 

ದಾವಣಗೆರೆ:  ಒಂದೇ ವೇದಿಕೆಯಲ್ಲಿ ಮಾವ ಅಳಿಯ ಜಟಾಪಟಿ

ಆದರೆ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ಯಾಮನೂರು ಶಿವಶಂಕರಪ್ಪ ಚುನಾವಣಾ ಅಖಾಡಕ್ಕೆ ಧುಮುಕಿದ್ದು, ಶತಾಯಗತಾಯಾಗಿ ಈ ಬಾರಿ ಸಿದ್ದೇಶ್ವರ್ ಅವರನ್ನು ಮಣಿಸಿ ದಕ್ಷಿಣ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಡಲು ಶಾಮನೂರು ಪ್ಲಾನ್ ಆಗಿದೆ.

ಈ ಹಿಂದೆ ಮೂರು ಬಾರಿ ಸಿದ್ದೇಶ್ವರ್ ಎದುರು ಮಲ್ಲಿಕಾರ್ಜುನ್ ಸೋಲು ಕಂಡಿದ್ದು, ಈ ಬಾರಿ ನಾನೊಂದು ಕೈ ನೋಡಿಯೇ ಬಿಡ್ತೀನಿ ಅಂತ ಶಾಮನೂರು ಅಖಾಡಕ್ಕಿಳಿದಿದ್ದಾರೆ.

ಒಟ್ಟಿನಲ್ಲಿ  ಈ ಬಾರಿ ಅಳಿಯ ಜಿ.ಎಂ.ಸಿದ್ಧೇಶ್ವರ್ ಹಾಗೂ ಮಾವ  ಶಾಮನೂರು ಶಿವಶಂಕರಪ್ಪ ನಡುವಿನ ಜಿದ್ದಾಜಿದ್ದಿಗೆ ದಾವಣಗೆರೆ ಲೋಕಸಭಾ ಅಖಾಡ ಸಾಕ್ಷಿಯಾಗಲಿದೆ.

Follow Us:
Download App:
  • android
  • ios