Asianet Suvarna News Asianet Suvarna News

'ಸದಾನಂದಗೌಡ್ರು ಮತ್ತೆ ಗೆಲ್ತಾರೆ, ಅದೇ ರೈಲ್ವೆ ಮಿನಿಸ್ಟ್ರು ಆಗ್ತಾರೆ': ಖ್ಯಾತ ಜ್ಯೋತಿಷಿ ಭವಿಷ್ಯ

ಒಂದ್ಕಡೆ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು ದೇವರ ಮೊರೆ ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೇ ಸೋಲು ಗೆಲುವನ್ನು ತಿಳಿಯಲು ಜ್ಯೋತಿಷಿಗಳ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಸದಾನಂದಗೌಡ ಹೊರತಾಗಿಲ್ಲ. ಹಾಗಾದ್ರೆ ಸ್ಮೖಲ್ ಗೌಡ್ರ ಭವಿಷ್ಯ ಹೇಗಿದೆ ನೋಡಿ..

Sadananda gowda will win In Bengaluru North Says astrologer Dwarakanath Guruji prediction
Author
Bengaluru, First Published Apr 5, 2019, 6:21 PM IST

ಬೆಂಗಳೂರು, [ಏ.05]:  ರಾಜ್ಯದಲ್ಲಿ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಸಂಸದ ಸದಾನಂದಗೌಡ ಹಾಗೂ ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ ನಡುವೆ ತೀವ್ರ ಪೈಪೋಟಿ ನಡೆದಿದೆ.

 ಈ ನಡುವೆ ಸ್ಮೈಲ್ ಗೌಡ್ರು ಖ್ಯಾತ ಜೋತಿಷ್ಯ ದ್ವಾರಕನಾಥ ಗುರೂಜಿ ಮೊರೆ ಹೋಗಿದ್ದಾರೆ. ಈ ವೇಳೆ ದ್ವಾರಕನಾಥ ಗುರೂಜಿ ಅವರು ಸದಾನಂದಗೌಡರ ಭವಿಷ್ಯ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ : ಪ್ರಖ್ಯಾತ ಜ್ಯೋತಿಷಿ

'ಮತ್ತೆ ಸದಾನಂದ ಗೌಡರು ಗೆಲುವು ಸಾಧಿಸುತ್ತಾರೆ. ಪುನಃ ರೈಲ್ವೆ ಖಾತೆಯನ್ನು ವಹಿಸಿಕೊಂಡು ಕೇಂದ್ರ ಮಂತ್ರಿಗಳಾಗ್ತಾರೆ. ಇದೇ ಖಾತೆ ಅವರಿಗೆ ಸಿಗಲಿದೆ' ಎಂದು ದ್ವಾರಕನಾಥ ಗುರೂಜಿ ಭವಿಷ್ಯ ನುಡಿದಿದ್ದಾರೆ. ಇದ್ರಿಂದ ಗೌಡ್ರಿಗೆ ಮತ್ತಷ್ಟು ಖುಷಿ ತಂದಿದೆ.

2013 ರಲ್ಲೇ ಈ ಮಾತನ್ನು ಹೇಳಿದ್ದೇನೆ. ಬಿಜೆಪಿಯನ್ನು ನೋಡಿ ಜನರು ಮತ ಹಾಕುತ್ತಿಲ್ಲ. ಮೋದಿ ವರ್ಚಸ್ಸಿನ ಹಿನ್ನಲೆ ಜನರು ಮತ ಹಾಕ್ತಿದ್ದಾರೆ. ನರೇಂದ್ರ ಎಂದರೆ ಇಂದ್ರ, ದೈವಾನುಗ್ರಹದಿಂದ ಮೋದಿ ಪ್ರಧಾನಿಗಳಾಗಿದ್ದಾರೆ ಎಂದು ಭವಿಷ್ಯ ಹೇಳಿದರು.

Follow Us:
Download App:
  • android
  • ios