Asianet Suvarna News Asianet Suvarna News

ಮಂಡ್ಯದಲ್ಲಿ ಚುನಾವಣೆ ಮುಗಿದ ಬಳಿಕ ಉಪ್ಪಿ ಪರ ಪ್ರಚಾರಕ್ಕೆ ಯಶ್, ದರ್ಶನ್

ಮಂಡ್ಯದಲ್ಲಿ ಚುನಾವಣೆ ಮುಗಿದ ಬಳಿಕ ಉಪ್ಪಿ ಪರ ಪ್ರಚಾರಕ್ಕೆ  ಯಶ್, ದರ್ಶನ್ | ಮುಂದಿನ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂಬುದಾಗಿ ಭರವಸೆ ನೀಡಿದ್ರಾ ಯಶ್, ದರ್ಶನ್? 

Rumors about After Mandya Yash and Darshan will campaign for Upendra
Author
Bengaluru, First Published Apr 2, 2019, 3:27 PM IST

ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಪಕ್ಷದ ಪರ ಪ್ರಚಾರಕ್ಕೆ ಜನರ ಕೊರತೆ ಎದುರಾಗಿದೆ. ಮಂಡ್ಯದಲ್ಲಿ ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ಅಬ್ಬರದಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿಯ ಗೋಳು ಕೇಳುವವರೇ ಇಲ್ಲದಂತಾಗಿದೆ. 

ದಕ್ಷಿಣದವರನ್ನು ಭಾರತೀಯರು ಎಂದು ಪರಿಗಣಿಸದ ಮೋದಿ ಸರ್ಕಾರ: ರಾಹುಲ್!

ಸ್ವತಃ ಉಪೇಂದ್ರ ಅವರೇ ಪ್ರಚಾರಕ್ಕೆ ಬಂದರೂ ಮಂಡ್ಯದ ತಮ್ಮ ನೆಚ್ಚಿನ ನಟನನ್ನು ನೋಡಲೂ ಆಗದಷ್ಟು ಜನರು ಬ್ಯೂಸಿಯಾಗಿದ್ದಾರೆ. ಈ ಮಧ್ಯೆ ಉಪೇಂದ್ರ ಬೆಂಬಲಕ್ಕೆ ಜೋಡೆತ್ತುಗಳಾದ ದರ್ಶನ್ ಮತ್ತು ಯಶ್ ಧಾವಿಸಿದ್ದಾರೆ. ತಾವು ಮಂಡ್ಯದಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಪ್ರಚಾರ ಮಾಡುತ್ತೇವೆ. 

ಸಾಲ ತೀರಿಸದ ರೈತರಿಗೆ ಜೈಲಿಲ್ಲ, ರಫೆಲ್ ತನಿಖೆ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರ!

ಈ ಚುನಾವಣೆಯಲ್ಲಿ ಸಾಧ್ಯವಾಗದೇ ಇದ್ದರೂ ಮುಂದಿನ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂಬುದಾಗಿ ಭರವಸೆ ನೀಡಿದ್ದಾರೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ. 

 

 

Follow Us:
Download App:
  • android
  • ios