ವಾದ್ರಾ ದೇಗುಲ ಭೇಟಿ ವೇಳೆ ‘ಮೋದಿ ಮೋದಿ’ ಎಂದು ಕೂಗಿದ ಜನರು| ರಾಬರ್ಟ್ ವಾದ್ರಾಗೆ ಮುಜುಗರ
ನವೆದೆಹಲಿ[ಮೇ.11]: ಮುಂಬೈನ ಮುಂಬಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾವ ರಾಬರ್ಟ್ ವಾದ್ರಾ ಮುಜುಗರಕ್ಕೆ ಈಡಾದ ಘಟನೆ ಶುಕ್ರವಾರ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ವಾದ್ರಾ ಅವರು ದೇವಸ್ಥಾನ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಭಕ್ತರು ‘ಮೋದಿ ಮೋದಿ’ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೆ ‘ಮೋದಿ ಜಿಂದಾಬಾದ್’, ‘ಭಾರತ ಮಾತಾ ಕೀ ಜೈ’ ಎಂದೂ ಕೂಗಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ವಾದ್ರಾಗೆ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ದೇವರ ಆಶೀರ್ವಾದ ಪಡೆಯಲು ಬಂದಿದ್ದೇನೆ. ನನಗೆ ರಾಜಕೀಯ ಬೇಕಾಗಿಲ್ಲ. ರಾಜಕೀಯ ಚಟುವಟಿಕೆಗಳನ್ನು ದೇಗುಲದಲ್ಲಿ ಮಾಡಬಾರದು ಎಂದು ವಾದ್ರಾ ಈ ಸಂದರ್ಭ ತಿಳಿಸಿದ್ದಾರೆ.
