ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಭೋಪಾಲ್ ಜನತೆ| ಉಮಾ ಭಾರತಿ ಅವರನ್ನು ಕಂಡು ಕಣ್ಣೀರಾದ ಸಾಧ್ವಿ| ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್| ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಅವರನ್ನು ಕಂಡು ಕಣ್ಣೀರಾದ ಸಾಧ್ವಿ| ಸಾಆಧ್ವಿಗೆ ನೀರು ಕೊಟ್ಟು ಸಾಂತ್ವನ ಹೇಳಿದ ಉಮಾ ಭಾರತಿ|

ಭೋಪಾಲ್(ಏ.29): ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಅವರನ್ನು ಕಂಡೊಡನೆ ಕಣ್ಣೀರಾಗಿದ್ದಾರೆ.

Add Asianetnews Kannada as a Preferred SourcegooglePreferred

ತಮ್ಮ ಪರ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಉಮಾ ಭಾರತಿ ಅವರನ್ನು ಕಂಡ ಸಾಧ್ವಿ, ಕಾರಿನಲ್ಲೇ ಕಣ್ಣೀರಾದರು. ಈ ವೇಳೆ ಸಾಧ್ವಿ ಅವರನ್ನು ಸಂತೈಸಿದ ಉಮಾ ಭಾರತಿ, ಕುಡಿಯಲು ನೀರು ಕೊಟ್ಟು ಧೈರ್ಯ ಹೇಳಿದರು.

Scroll to load tweet…

ಭೋಪಾಲ್ ಮತ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿದ್ದ ಉಮಾ ಭಾರತಿ, ಇದೀಗ ಸಾಧ್ವಿ ಪರ ಚುನಾವಣಾ ಪ್ರಚಾರ ಮಾಡಿ ಪಕ್ಷ ಮೊದಲು ಎಂಬ ಸಿದ್ಧಾಂತವನ್ನು ಎತ್ತಿ ಹಿಡಿದಿರುವುದು ವಿಶೇಷ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು, ಏ.23ರಂದು ಎರಡನೇ ಹಂತದ ಮತದಾನ ಮುಕ್ತಾಯ ಕಂಡಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.