ಎಲ್ಲಾ ಅಕ್ರಮ ವಲಸಿಗರನ್ನೂ ಹೊರದಬ್ಬಲಾಗುವುದು: ಪ್ರಧಾನಿ ಮೋದಿ!
ಅಸ್ಸಾಂ ಅಕಾರ್ಡ್ಗೆ ಎನ್ಡಿಎ ಸರ್ಕಾರ ಬದ್ಧ ಎಂದ ಪ್ರಧಾನಿ| ಅಸ್ಸಾಂ ನ 6 ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಸ್ಥಾನಮಾನ?| ಧರ್ಮ ಲೆಕ್ಕಿಸದೇ ಎಲ್ಲಾ ಅಕ್ರಮ ವಲಸಿಗರನ್ನೂ ಗಡಿಪಾರು ಮಾಡುವ ಭರವಸೆ| ‘ಅಸ್ಸಾಂ ಒಪ್ಪಂದ ಜಾರಿಗೊಳಿಸಲು ಕೇಂದ್ರ ಸರ್ಕಾರದಿಂದ ಶಕ್ತಿ ಮೀರಿ ಪ್ರಯತ್ನ’|
ಮೊರಾನ್(ಮಾ.30): ಅಸ್ಸಾಂ ಅಕಾರ್ಡ್ಗೆ ಎನ್ಡಿಎ ಸರ್ಕಾರ ಬದ್ಧವಾಗಿದ್ದು, ಅಸ್ಸಾಂ ನ 6 ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡಲು ಗಂಭೀರ ಚಿಂತನೆ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
#WATCH Prime Minister Narendra Modi addresses a public rally in Gohpur, Assam. pic.twitter.com/pWw2BC1jl8
— ANI (@ANI) March 30, 2019
ಅಸ್ಸಾಂನ ಮೊರಾನ್ನಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಅಸ್ಸಾಂ ಒಪ್ಪಂದ ಒಮ್ಮೆ ಜಾರಿಯಾದರೆ ಎಲ್ಲಾ ಅಕ್ರಮ ವಲಸಿಗರನ್ನೂ ಅವರ ಧರ್ಮವನ್ನು ಲೆಕ್ಕಿಸದೇ ರಾಜ್ಯದಿಂದ ಗಡಿಪಾರು ಮಾಡಲಾಗುವುದು ಎಂದು ಭರವಸೆ ನೀಡಿದರು.
#WATCH "Mein ek chowkidar hun, mein ek chowkidar hun...aap bhi hain na?", asks Prime Minister Narendra Modi to the public present at his rally in Gohpur, Assam. pic.twitter.com/MhmtlI5Z46
— ANI (@ANI) March 30, 2019
ಕಾಂಗ್ರೆಸ್ ಸ್ಥಗಿತಗೊಳಿಸಿದ್ದ ಅಸ್ಸಾಂ ಒಪ್ಪಂದವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ ಎಂದ ಮೋದಿ, ಅಸ್ಸಾಂ ನ ಸಂಸ್ಕೃತಿ ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ನಾವು ಶ್ರಮಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.