ಟೀಕಿಸಲು ವೇದಿಕೆ ಏರಿದವನಿಂದ ಮೋದಿ ಗುಣಗಾನ: ಇಂಗು ತಿಂದ ಮಂಗನಾದ ಕಾಂಗ್ರೆಸ್
ನಿಮ್ಮ ಖಾತೆಗೆ 15 ಲಕ್ಷ ಬಂತೇ?| ದಿಗ್ವಿಯಯ್ ಸಿಂಗ್ ಪ್ರಶ್ನೆಗೆ ಉತ್ತರಿಸಲು ವೇದಿಕೆ ಏರಿದ ಯುವಕ| ಮೋದಿ ಟೀಕಿಸಲು ಹೋಗಿ ತಮಗೇ ಅವಮಾನ ಮಾಡಿಸಿಕೊಂಡ ಸಿಂಗ್| ವೇದಿಕೆ ಏರಿದಾತನಿಂದ ಮೋದಿ ಗುಣಗಾನ
ಭೋಪಾಲ್[ಏ.23]: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ನಾಯಕರು ಪರಸ್ಪರ ವಾಗ್ದಾಳಿ ನಡೆಸುವುದರಲ್ಲಿ ತಲ್ಲೀನರಾಗಿದ್ದಾರೆ. ಹೀಗಿರುವಾಗಲೇ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ರನ್ನು ಪೇಚಿಗೀಡು ಮಾಡಿದ ಪ್ರಸಂಗ ನಡೆದಿದೆ.
ಚುನಾವಣಾ ಪ್ರಚಾರಕ್ಕಾಗಿ ಭೋಪಾಲ್ ನ ಬೈರಸಿಯಾ ತಲುಪಿದ್ದ ದಿಗ್ವಿಜಯ್ ಸಿಂಗ್ ವೇದಿಕೆ ಮೇಲೆ ನಿಂತು ಮೋದಿ ವಿರುದ್ಧ ವಾಗ್ದಾಲಿ ನಡೆಸಿದ್ದಾರೆ. ಬಳಿಕ ನೆರೆದಿದ್ದ ಜನರ ಬಳಿ ನಿಮ್ಮ ಖಾತೆಗೆ 15 ಲಕ್ಷ ಬಂತೇ? ಎಂದು ಪ್ರಶ್ನಿಸಿದ್ದಾರೆ. ಇದೇ ಪ್ರಶ್ನೆಯನ್ನು ಮೂರ್ನಾಲ್ಕು ಬಾರಿ ಕೇಳಿದಾಗ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಯುವಕನೊಬ್ಬ ಕೈ ಮೇಲಕ್ಕೆತ್ತಿದ್ದಾನೆ. ಇದನ್ನು ಕಂಡ ದಿಗ್ವಿಜಯ್ ಸಿಂಗ್ ಆತನನ್ನು ಕೂಡಲೇ ವೇದಿಕೆಗೆ ಕರೆದಿದ್ದಾರೆ.
@shailendranrb बैरसिया में @digvijaya_28 ने पूछा किसी के खाते में आये 15 लाख,लड़के ने हाथ उठाया मंच पर आया सर्जिकल स्ट्राइक के गुणगान कर चला गया @INCMP @INCIndia @BJP4India @BJP4MP @ChouhanShivraj @narendramodi @AmitShah @ndtvindia @drhiteshbajpai @RahulKothariBJP #ModiHiAayega pic.twitter.com/331fYzgtPC
— Anurag Dwary (@Anurag_Dwary) April 22, 2019
ಆದರೆ ವೇದಿಕೆಗೆ ಬಂದ ಯುವಕ ಸರ್ಜಿಕಲ್ ಸ್ಟ್ರೈಕ್ ವಿಚಾರವಾಗಿ ಮಾತನಾಡುತ್ತಾ ಪ್ರಧಾನಿ ಮೋದಿಯ ಗುಣಗಾನ ಆರಂಭಿಸಿದ್ದಾನೆ. ಇದನ್ನು ಕೇಳಿದ ದಿಗ್ವಿಜಯ್ ಸಿಂಗ್ ಮುಖ ಕಳೆಗಟ್ಟಿದೆ. ಮೈಕ್ ಹಿಡಿದ ಯುವಕ 'ಮೋದೀಹಜಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಉಗ್ರರನ್ನು ಸದೆ ಬಡಿದಿದ್ದಾರೆ' ಎಂದಿದ್ದಾನೆ. ಇಷ್ಟಾಗಿದ್ದೇ ತಡ ಕಾಂಗ್ರೆಸ್ ಕಾರ್ಯಕರ್ತರು ಆತನನ್ನು ಒತ್ತಾಯಪೂರ್ವಕವಾಗಿ ವೇದಿಕೆಯಿಂದ ಕೆಳಗಿಳಿಸಿದ್ದಾರೆ.