ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸ್ಪರ್ಧೆ ಸಮರ್ಥಿಸಿಕೊಂಡ ಪ್ರಧಾನಿ| 'ಹಿಂದೂ ನಾಗರಿಕತೆ ಅವಮಾನಿಸಿದವರಿಗೆ ಸಾಧ್ವಿ ಸ್ಪರ್ಧೆ ಉತ್ತರ'| ಸಾಧ್ವಿ ಸ್ಪರ್ಧೆ ಕಾಂಗ್ರೆಸ್ಗೆ ದುಬಾರಿಯಾಗಿ ಪರಿಣಮಿಸಲಿದೆ ಎಂದ ಮೋದಿ| 'ರಾಹುಲ್, ಸೋನಿಯಾ ಕೂಡ ಕ್ರಿಮಿನಲ್ ಹಿನ್ನೆಲೆಯುಳ್ಳವರು'|
ನವದೆಹಲಿ(ಏ.20): ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಭೋಪಾಲ್ ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದನ್ನು ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದಾರೆ.
Add Asianetnews Kannada as a Preferred Source

ದೇಶದ ಶ್ರೀಮಂತ ಹಿಂದೂ ನಾಗರಿಕತೆಯನ್ನು ಭಯೋತ್ಪಾದನೆಗೆ ಹೋಲಿಕೆ ಮಾಡಿದವರಿಗೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸ್ಪರ್ಧೆ ಉತ್ತರ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಸಾಧ್ವಿ ಸ್ಪರ್ಧೆ ಕಾಂಗ್ರೆಸ್ಗೆ ದುಬಾರಿಯಾಗಿ ಪರಿಣಮಿಸಲಿದ್ದು, ಹಿಂದೂ ಭಯೋತ್ಪಾದನೆ ಎಂದು ಗುಲ್ಲೆಬ್ಬಿಸಿದ್ದ ಕಾಂಗ್ರೆಸ್ಗೆ ತಕ್ಕ ಶಾಸ್ತಿಯಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿರುವ ಪ್ರಧಾನಿ, ರಾಯ್ ಬರೇಲಿ ಮತ್ತು ಅಮೇಥಿಯಿಂದ ಕಣಕ್ಕಿಳಿದಿರುವ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕೂಡ ಕ್ರಿಮಿನಿಲ್ ಹಿನ್ನೆಲೆಯುಳ್ಳವರು ಎಂದು ಹೇಳುವ ಮೂಲಕ ಸಾಧ್ವಿ ಸ್ಪರ್ಧೆಯನ್ನು ಸಮರ್ಥಿಸಿಕೊಂಡರು.
