ಬಂಗಾಳದಲ್ಲಿ ಬಿಜೆಪಿಗೆ ಬಿಗ್ ರಸಗುಲ್ಲಾ ಪಕ್ಕಾ ಎಂದ ಮಮತಾ| ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೊನ್ನೆ ಸುತ್ತಲಿದೆ ಎಂದ ಪ.ಬಂಗಾಳ ಸಿಎಂ| ಪ್ರಧಾನಿ ಲಡ್ಡೂ ಹೇಳಿಕೆಗೆ ತಿರುಗೇಟು ನೀಡಿದ ಮಮತಾ ಬ್ಯಾಮರ್ಜಿ| ‘ರಾಜ್ಯದ ಮತದಾರ ಕೋಮುವಾದಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಿದ್ದಾನೆ’|
ಕೋಲ್ಕತ್ತಾ(ಏ.19): ಪ.ಬಂಗಾಳದಲ್ಲಿ ಲೋಕಸಭೆ ಚುನಾವಣೆಯ ಮೂಲಕ ಕಮಲ ಅರಳಿಸುವ ಇರಾದೆಯಲ್ಲಿರುವ ಬಿಜೆಪಿಗೆ ಸಿಎಂ ಮಮತಾ ಬ್ಯಾನರ್ಜಿ ಟಾಂಗ್ ನೀಡಿದ್ದಾರೆ.
Add Asianetnews Kannada as a Preferred Source

ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ ರಾಜ್ಯದಲ್ಲಿ ದೊಡ್ಡ ರಸಗುಲ್ಲಾ(ಸೊನ್ನೆ) ಸಿಗಲಿದೆ ಎಂದು ಮಮತಾ ಕುಹುಕವಾಡಿದ್ದಾರೆ.
ಬಿಜೆಪಿ ಗೆಲುವು ಕೇಂದ್ರ ಮತ್ತ ರಾಜ್ಯದಲ್ಲಿ ಪಕ್ಷಕ್ಕೆ ಲಡ್ಡೂ ಸಿಕ್ಕಂತೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ, ಮಮತಾ ಮೇಲಿನಂತೆ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿಗೆ ಲಡ್ಡೂ ಬದಲಾಗಿ ದೊಡ್ಡ ರಸಗುಲ್ಲಾ ಸಿಗಲಿದೆ ಎಂದು ಮಮತಾ ಕಿಚಾಯಿಸಿದ್ದು, ರಾಜ್ಯದ ಮತದಾರ ಕೋಮುವಾದಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಿದ್ದಾನೆ ಎಂದು ಹರಿಹಾಯ್ದಿದ್ದಾರೆ.
