ದೇಶದಲ್ಲೇ ಮೋದಿ ಅಲೆ ಇತ್ತು ಎಂದು ಒಪ್ಪಿಕೊಂಡ ಜಾರಕಿಹೊಳಿ
ದೇಶಾದ್ಯಂತ ಕಾಂಗ್ರೆಸ್ ಹಿಂದೆಂದೂ ಕಾಣದ ಸೋಲು ಕಂಡಿದ್ದು ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ.
ಬೆಂಗಳೂರು[ಮೇ. 24] ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದೆ. ಹಾಗಾದರೆ ರಾಜ್ಯದ ಕಾಂಗ್ರೆಸ್ ನಾಯಕರು, ಸಚಿವರು ಏನು ಹೇಳುತ್ತಾರೆ?
ಸಚಿವರಾದ ಕೆ.ಜೆ.ಜಾರ್ಜ್, ಯುಟಿ ಖಾದರ್. ಸತೀಶ್ ಜಾರಕಿಹೊಳಿ ಮತ್ತು ದೇಶಪಾಂಡೆ ಮಾತನಾಡಿದ್ದಾರೆ. ನಮಗೆ ಆಘಾತವಾಗಿದೆ, ಹಾನಿಯಾಗಿದೆ. ಆದರೆ ಜನರು ನೀಡಿದ ಫಲಿತಾಂಶಕ್ಕೆ ತಲೆಬಾಗುತ್ತೇವೆ ಎಂದಿದ್ದಾರೆ.
ಇನ್ನೊಂದು ಕಡೆ ಇದು ಲೋಕಸಭೆಗೆ ಜನ ನೀಡಿದ ತೀರ್ಮಾನ, ರಾಜ್ಯದ ದೋಸ್ತಿ ಸರಕಾರದ ಮೇಲೆ ಈ ಫಲಿತಾಂಶ ಯಾವ ಪರಿಣಾಮವನ್ನು ಬೀರುವುದಿಲ್ಲ ಎಂದು ಸಚಿವರೆಲ್ಲರೂ ಹೇಳಿದ್ದಾರೆ.
"
"
"
"