Asianet Suvarna News Asianet Suvarna News

ಸುಮ​ಲತಾ ಗೆಲುವು ನಿಶ್ಚಿತ : ಭವಿಷ್ಯ ನುಡಿದ ಬಿಜೆಪಿ ನಾಯಕ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇತ್ತ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಸುಮಲತಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಇನ್ನೊಂದು ಕಡೆ ಬಿಜೆಪಿ ನಾಯಕರು ಅವರು ಗೆದ್ದೆ ಗೆಲ್ತಾರೆ ಎಂದು ಭವಿಷ್ಯವನ್ನು ನುಡಿದಿದ್ದಾರೆ. 

Loksabha Elections 2019 Sumalatha Will Win in Mandya Says BS Yeddyurappa
Author
Bengaluru, First Published Apr 5, 2019, 11:26 AM IST

ದಾವಣಗೆರೆ: ಮಂಡ್ಯ​ದಲ್ಲಿ ಪಕ್ಷೇ​ತರ ಅಭ್ಯರ್ಥಿ ಸುಮ​ಲತಾ ಗೆಲುವು, ತುಮ​ಕೂ​ರಿ​ನಲ್ಲಿ ಮಾಜಿ ಪ್ರಧಾನಿ ಎಚ್‌.​ಡಿ.​ದೇ​ವೇ​ಗೌ​ಡರ ಸೋಲು ನಿಶ್ಚಿತ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾ​ಧ್ಯಕ್ಷ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಭವಿಷ್ಯ ನುಡಿ​ದಿ​ದ್ದಾರೆ.

ನಗ​ರ​ದಲ್ಲಿ ಗುರು​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ತುಮ​ಕೂ​ರಿ​ನಲ್ಲಿ ದೇವೇ​ಗೌ​ಡರು, ಮಂಡ್ಯ ಹಾಗೂ ಹಾಸ​ನ​ದಲ್ಲಿ ದೇವೇ​ಗೌ​ಡರ ಮಕ್ಕ​ಳು, ಮೊಮ್ಮ​ಕ್ಕಳು ಸೋತು ಮನೆ ಸೇರು​ತ್ತಾರೆ. ತುಮ​ಕೂ​ರಿ​ನಲ್ಲಿ ಬಿಜೆ​ಪಿಯ ಜಿ.ಎ​ಸ್‌.​ಬ​ಸ​ವ​ರಾಜ, ಹಾಸ​ನ​ದಲ್ಲಿ ಎ.ಮಂಜು ಗೆಲುವು ದಾಖ​ಲಿ​ಸ​ಲಿ​ದ್ದಾರೆ ಎಂದ​ರು.

ಇನ್ನು ಮಂಡ್ಯ​ದಲ್ಲಿ ಸುಮ​ಲತಾ ಅವ​ರಿಗೆ ಎಲ್ಲರ ಬೆಂಬ​ಲವೂ ಇದ್ದು, ಸುಮ​ಲತಾ ಅಂಬ​ರೀಷ್‌ ಭಾರೀ ಅಂತ​ರ​ದಲ್ಲೇ ಜಯ ದಾಖ​ಲಿ​ಸ​ಲಿದ್ದಾರೆ. ದಾವ​ಣ​ಗೆರೆ ಲೋಕ​ಸಭಾ ಕ್ಷೇತ್ರ​ದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.​ಸಿ​ದ್ದೇ​ಶ್ವರ ಈಗಾ​ಗಲೇ ಗೆದ್ದಾ​ಗಿದೆ. ಎಷ್ಟುಮತ​ಗಳ ಅಂತ​ರ ಎಂಬು​ದಷ್ಟೇ ಲೆಕ್ಕ ಮಾಡ​ಬೇ​ಕಷ್ಟೇ ಎಂದು ತಿಳಿ​ಸಿ​ದರು.

ರಾಜ್ಯ​ದಲ್ಲಿ 22 ಕ್ಷೇತ್ರ​ದಲ್ಲಿ ಬಿಜೆಪಿ ಜಯ ಸಾಧಿ​ಸು​ವುದು ನಿಶ್ಚಿತ. ದೇಶ​ದಲ್ಲಿ ಬಿಜೆಪಿ ಸ್ವಂತ ಬಲ​ ಮೇಲೆಯೇ 300 ಸ್ಥಾನ ಗಳಿ​ಸ​ಲಿದ್ದು, ಮೋದಿ ಮತ್ತೊಮ್ಮೆ ಪ್ರಧಾ​ನಿ​ಯಾ​ಗ​ಲಿ​ದ್ದಾರೆ.

ವಿದೇ​ಶೀ ಹೂಡಿ​ಕೆ​ದಾ​ರರು ನಮ್ಮ ದೇಶ​ದತ್ತ ಮುಖ ಮಾಡು​ತ್ತಿದ್ದು, 16 ಲಕ್ಷ ಕೋಟಿ ಹೂಡಿಕೆ ಪ್ರಮಾಣ ಹೆಚ್ಚಾ​ಗಿದೆ. ದೇಶದ ಆರ್ಥಿಕ ಸ್ಥಿತಿಯಲ್ಲೂ ಕ್ರಾಂತಿ​ಕಾರಿ ಬದ​ಲಾ​ವಣೆ ಮೋದಿ ಆಡಳಿತದಲ್ಲಿ ಆಗಿದೆ. ಮುಂದೆಯೂ ಆಗ​ಲಿದೆ ಎಂದು ಹೇಳಿ​ದರು.

ಬಿಜೆಪಿ ಮುಖಂಡ, ಮಾಜಿ ಸಚಿವ ಮುರು​ಗೇಶ ನಿರಾಣಿ ಮಾತ​ನಾಡಿ, ಬೆಳ​ಗಾವಿ ಭಾಗದ ಎಲ್ಲಾ 7 ಲೋಕ​ಸಭಾ ಕ್ಷೇತ್ರ​ಗ​ಳಲ್ಲೂ ಬಿಜೆ​ಪಿ ಗೆಲು​ವು ಸಾಧಿ​ಸ​ಲಿದೆ. ದಾವ​ಣ​ಗೆ​ರೆ​ಯಲ್ಲೂ ನಮ್ಮ ಅಭ್ಯರ್ಥಿ ಜಿ.ಎಂ.​ಸಿ​ದ್ದೇ​ಶ್ವರ ಸತತ 4ನೇ ಬಾರಿಗೆ ಜಯ ದಾಖ​ಲಿ​ಸ​ಲಿ​ದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios