ಉತ್ತರ ಕನ್ನಡ 'ಕೈ'ಗೆ, ಹೆಗಡೆ ವಿರುದ್ಧ ದೋಸ್ತಿ ಅಭ್ಯರ್ಥಿ ಬದಲು?
ಶಿವಮೊಗ್ಗ ಲೋಕಸಭಾ ಅಖಾಡ ಮತ್ತೆ ರಂಗೇರಿದ್ದು ಮಾಜಿ ಸಿಎಂ ಪುತ್ರರಿಬ್ಬರ ನಡುವೆ ಹಣಾಹಣಿ ನಡೆಯುವುದು ಪಕ್ಕಾ ಆಗಿದೆ.
ಶಿವಮೊಗ್ಗ(ಮಾ.16) ಶಿವಮೊಗ್ಗ ಮೈತ್ರಿಕೂಟದ ಲೋಕಸಭಾ ಅಭ್ಯರ್ಥಿಯಾಗಿ ಮಧುಬಂಗಾರಪ್ಪ ಕಣಕ್ಕಿಳಿಯುತ್ತಿದ್ದಾರೆ. ಮಧುಬಂಗಾರಪ್ಪ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇವೆ. ಹಾಸನ, ಮಂಡ್ಯದಲ್ಲಿ ಮೊಮ್ಮಕಳನ್ನ ಹೇಗೆ ಗೆಲ್ಲಿಸಲು ಪ್ರಯತ್ನ ಮಾಡುತ್ತೇವೆ ಅದೇ ರೀತಿ ಮಧುಬಂಗಾರಪ್ಪ ಗೆಲ್ಲಿಸಲು ಪ್ರಯತ್ನ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಗೊಂದಲದ ಬಗ್ಗೆ ಬೆಳಿಗ್ಗೆ ದೇಶಪಾಂಡೆಯವರು ಬಂದು ಮಾತನಾಡಿದ್ದಾರೆ. ಇನ್ನು ಯಾವುದೇ ತೀರ್ಮಾನವಾಗಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರು ಬಂದು ಮಧುಬಂಗಾರಪ್ಪ ಪರ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಬಿಟ್ಟುಕೊಟ್ಟ 8 ಸೀಟುಗಳ ಪೈಕಿ 3 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ JDS
ಉತ್ತರ ಕನ್ನಡ ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಆದರೆ ಕಾಂಗ್ರೆಸ್ ನಿಂದ ಅಪಸ್ವರ ಬಂದಿದೆ. ಬಿಜೆಪಿಯ ಅನಂತ್ ಕುಮಾರ್ ಹೆಗಡೆ ವಿರುದ್ಧ ಸ್ಪರ್ಧೆ ಮಾಡಲು ಜೆಡಿಎಸ್ ಗೆ ಪ್ರಬಲ ಅಭ್ಯರ್ಥಿಯೂ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.