ಲೋಕಸಭಾ ಚುನಾವಣೆಗೆ ಎಲ್ಲೆಡೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇತ್ತ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಓರ್ವರಿಗೆ ಭದ್ರತೆ ನೀಡಲು ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಬೆಂಗಳೂರು: ಕರ್ನಾಟಕ ಲೋಕಸಭಾ ಚುನಾವಣೆಗೆ ಕರ್ನಾಟಕ ಸಜ್ಜಾಗಿದೆ. ಮತದಾನಕ್ಕೆ ಒಂದೇ ದಿನ ಬಾಕಿ ಉಳಿದಿದೆ.
Add Asianetnews Kannada as a Preferred Source

ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಸೂಕ್ತ ಭದ್ರತೆಗೆ ಕೇಂದ್ರ ಭದ್ರತಾ ಪಡೆ ಸೇರಿ 50 ಪೊಲೀಸರನ್ನು ನಿಯೋಜಿಸ ಲಾಗಿದೆ.
ಅಲ್ಲದೇ ಮಂಡ್ಯದಲ್ಲೇ ದಕ್ಷಿಣ ವಲಯ ಐಜಿಪಿ ಅವರು ಮೊಕ್ಕಾಂ ಹೂಡಿ ಆ ಕ್ಷೇತ್ರದ ಭದ್ರತೆ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಎಡಿಜಿಪಿ ಕಮಲ್ ಪಂತ್ ತಿಳಿಸಿದರು. ಚುನಾವಣಾ ಆಯೋಗಕ್ಕೆ ಭದ್ರತೆ ಕೋರಿ ಸುಮಲತಾ ಮನವಿ ಮಾಡಿದ್ದರು.
