ಅಸೆಂಬ್ಲಿಗೆ ಓಕೆ, ಸಂಸತ್ತಿಗೆ ಯಾಕೆ? ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದ ಛತ್ತೀಸ್ಗಢ!
ಬಿಜೆಪಿ ಭದ್ರಕೋಟೆಯಾಗಿದ್ದ ಛತ್ತೀಸ್ಗಢ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿತ್ತು. ಮತದಾರರ ಒಲವಾಂತರ ಬಿಜೆಪಿಗೆ ತಲೆನೋವಾಗಿತ್ತು. ಈ ಬಾರಿಯ ಲೋಕಸಭೆ ಫಲಿತಾಂಶ ಹೇಗಿದೆ ನೋಡೋಣ...
ರಾಯಪುರ: ಉತ್ತರ ಭಾರತದ ಬಹುತೇಕ ರಾಜ್ಯಗಳ ಮತದಾರರು NDAಗೆ ಎರಡನೇ ಅವಕಾಶ ನೀಡಲು ನಿರ್ಧರಿಸಿದ್ದಾರೆ. ಅವುಗಳಲ್ಲಿ ನಕ್ಸಲ್ ಪೀಡಿತ ಛತ್ತೀಸ್ಗಢವೂ ಒಂದು.
ಈಗ ಲಭ್ಯವಿರುವ ಮಾಹಿತಿ ಪ್ರಕಾರ 11 ಲೋಕಸಭೆ ಕ್ಷೇತ್ರಗಳ ಪೈಕಿ, 8ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದರೆ, ಉಳಿದ 3 ಸೀಟುಗಳಲ್ಲಿ ಕಾಂಗ್ರೆಸ್ ಮುಂದಿದೆ.
ಇದನ್ನೂ ಓದಿ | ಗೆದ್ದು ಬೀಗಿದ ಸ್ಮೃತಿ, ಸುಮಲತಾ, ಯುಗಪುರುಷ ನಟಿಗೆ ಸೋಲೇ ಗತಿ!
2014 ಲೋಕಸಭೆ ಚುನಾವಣೆಯಲ್ಲಿ 10 ಮಂದಿ ಬಿಜೆಪಿ ಸಂಸದರನ್ನು ಛತ್ತೀಸ್ಗಢ ಮತದಾರರು ಆರಿಸಿ ಕಳುಹಿಸಿದ್ದರು.
ಬಿಜೆಪಿ ಭದ್ರಕೋಟೆಯಾಗಿದ್ದ ಈ ರಾಜ್ಯವು ಕಳೆದ (2018) ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದಿದೆ. 90 ಸದಸ್ಯಬಲದ ವಿಧಾನಸಭೆಗೆ 68 ಕಾಂಗ್ರೆಸ್ ಸದಸ್ಯರನ್ನು ಇಲ್ಲಿನ ಮತದಾರರು ಆರಿಸಿ ಕಳುಹಿಸಿದ್ದಾರೆ.