ಕೈಗೆ ಮೈಸೂರು ಪಾಕ್, ಚುನಾವಣೆಗೂ ಮುನ್ನವೇ ಜಿದ್ದಿನಲ್ಲಿ ಗೆದ್ದ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹಠದಲ್ಲಿ ಚುನಾವಣೆಗೂ ಮುನ್ನವೇ ಗೆದ್ದಿದ್ದಾರೆ. ಹಳೆ ಮೈಸೂರಿನ ಗಟ್ಟಿ ಕ್ಷೇತ್ರ ಮೈಸೂರಿನ ಮೇಲೆ ಕಣ್ಣಿಟ್ಟಿದ್ದ ಜೆಡಿಎಸ್ ಗೆ ಸಿದ್ದರಾಮಯ್ಯ ಸರಿಯಾದ ಟಾಂಗ್ ನೀಡಿದ್ದಾರೆ.
ಬೆಂಗಳೂರು[ಮಾ. 13] ದೋಸ್ತಿಗಳಲ್ಲಿ ಸೀಟು ಹಂಚಿಕೆ ಫೈನಲ್ ಆಗಿದ್ದು ಕಾಂಗ್ರೆಸ್ ಗೆ 20 ಮತ್ತು ಜೆಡಿಎಸ್ ಗೆ 8 ಕ್ಷೇತ್ರಗಳು ಲಭ್ಯವಾಗಿದೆ.
ಮೈಸೂರನ್ನು ಜೆಡಿಎಸ್ ಕೇಳಿಕೊಂಡೇ ಬಂದಿತ್ತು. ಆದರೆ ಸಿದ್ದರಾಮಯ್ಯ ಅಂತಿಮವಾಗಿ ಮೈಸೂರನ್ನು ಕಾಂಗ್ರೆಸ್ ಬಳಿಯೇ ಉಳಿಸಿಕೊಂಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಯಲ್ಲಿ ಗೆದ್ದಿದ್ದ ಸಿದ್ದರಾಮಯ್ಯ ಇತ್ತೀಚೆಗೆ ತಮ್ಮ ಹೆಚ್ಚಿನ ಕಾಲವನ್ನು ಬದಾಮಿಗೆ ಮೀಸಲಿಟ್ಟಿದ್ದರು.
ದೋಸ್ತಿ ಸೀಟು ಹಂಚಿಕೆ ಫೈನಲ್: ಕಾಂಗ್ರೆಸ್ ಗೆ 20, JDSಗೆ 8 ಸ್ಥಾನ..!
ಆದರೆ ಈ ಎಲ್ಲದನ್ನು ಮೀರಿ ಹಳೆ ಮೈಸೂರು ಭಾಗದಲ್ಲಿ ಮತ್ತೆ ಸಿದ್ದರಾಮಯ್ಯ ವಿಜೃಂಭಿಸಿದ್ದಾರೆ. ಮೈಸೂರಿನ ಬದಲು ಜೆಡಿಎಸ್ ಗೆ ತುಮಕೂರು ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ವಿಜಯ್ ಶಂಕರ್ ಅವರನ್ನು ಬಿಜೆಪಿಯಿಂದ ಕರೆತರಲಾಗಿದ್ದು ಅವರಿಗೆ ಟಿಕೆಟ್ ಕೊಡುವ ಮಾತನ್ನು ಸಿದ್ದರಾಮಯ್ಯ ನೀಡಿದ್ದರು.