Asianet Suvarna News Asianet Suvarna News

ಕೈಗೆ ಮೈಸೂರು ಪಾಕ್, ಚುನಾವಣೆಗೂ ಮುನ್ನವೇ ಜಿದ್ದಿನಲ್ಲಿ ಗೆದ್ದ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹಠದಲ್ಲಿ ಚುನಾವಣೆಗೂ ಮುನ್ನವೇ ಗೆದ್ದಿದ್ದಾರೆ. ಹಳೆ ಮೈಸೂರಿನ ಗಟ್ಟಿ ಕ್ಷೇತ್ರ ಮೈಸೂರಿನ ಮೇಲೆ ಕಣ್ಣಿಟ್ಟಿದ್ದ ಜೆಡಿಎಸ್ ಗೆ ಸಿದ್ದರಾಮಯ್ಯ ಸರಿಯಾದ ಟಾಂಗ್ ನೀಡಿದ್ದಾರೆ.

Loksabha Election 2019 karnataka-congress-jds- seat-sharing and Siddaramaiah Victory
Author
Bengaluru, First Published Mar 13, 2019, 8:38 PM IST

ಬೆಂಗಳೂರು[ಮಾ. 13]  ದೋಸ್ತಿಗಳಲ್ಲಿ ಸೀಟು ಹಂಚಿಕೆ ಫೈನಲ್ ಆಗಿದ್ದು ಕಾಂಗ್ರೆಸ್ ಗೆ 20 ಮತ್ತು ಜೆಡಿಎಸ್ ಗೆ 8 ಕ್ಷೇತ್ರಗಳು ಲಭ್ಯವಾಗಿದೆ. 

ಮೈಸೂರನ್ನು ಜೆಡಿಎಸ್ ಕೇಳಿಕೊಂಡೇ ಬಂದಿತ್ತು. ಆದರೆ ಸಿದ್ದರಾಮಯ್ಯ ಅಂತಿಮವಾಗಿ ಮೈಸೂರನ್ನು ಕಾಂಗ್ರೆಸ್ ಬಳಿಯೇ ಉಳಿಸಿಕೊಂಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಯಲ್ಲಿ ಗೆದ್ದಿದ್ದ ಸಿದ್ದರಾಮಯ್ಯ ಇತ್ತೀಚೆಗೆ ತಮ್ಮ ಹೆಚ್ಚಿನ ಕಾಲವನ್ನು ಬದಾಮಿಗೆ ಮೀಸಲಿಟ್ಟಿದ್ದರು.

ದೋಸ್ತಿ ಸೀಟು ಹಂಚಿಕೆ ಫೈನಲ್: ಕಾಂಗ್ರೆಸ್ ಗೆ 20, JDSಗೆ 8 ಸ್ಥಾನ..!

ಆದರೆ ಈ ಎಲ್ಲದನ್ನು ಮೀರಿ ಹಳೆ ಮೈಸೂರು  ಭಾಗದಲ್ಲಿ ಮತ್ತೆ ಸಿದ್ದರಾಮಯ್ಯ ವಿಜೃಂಭಿಸಿದ್ದಾರೆ. ಮೈಸೂರಿನ ಬದಲು ಜೆಡಿಎಸ್ ಗೆ ತುಮಕೂರು ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ವಿಜಯ್ ಶಂಕರ್ ಅವರನ್ನು ಬಿಜೆಪಿಯಿಂದ ಕರೆತರಲಾಗಿದ್ದು ಅವರಿಗೆ ಟಿಕೆಟ್ ಕೊಡುವ ಮಾತನ್ನು ಸಿದ್ದರಾಮಯ್ಯ ನೀಡಿದ್ದರು.

Follow Us:
Download App:
  • android
  • ios