Asianet Suvarna News Asianet Suvarna News

ದೇಶಕ್ಕಾಗಿ ಮತ್ತೊಮ್ಮೆ ಮೋದಿ : ತೇಜಸ್ವಿ ಸೂರ್ಯ ಕರೆ

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಅಭ್ಯರ್ಥಿಗಳು.ಎಲ್ಲೆಡೆ ಮುಂಚಿನ ಸಂಚಾರ ನಡೆಸುತ್ತಿದ್ದಾರೆ. ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ ಕೂಡ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. 

Lok Sabha Elections 2019 Tejaswi Surya Campaign
Author
Bengaluru, First Published Apr 6, 2019, 7:44 AM IST | Last Updated Apr 6, 2019, 7:44 AM IST

ಬೊಮ್ಮನಹಳ್ಳಿ: ದೇಶಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಗೆಲ್ಲಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ‍್ಯ ಹೇಳಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅರಕೆರೆ ವಾರ್ಡ್‌ನಲ್ಲಿ ಪ್ರಚಾರ ಕೈಗೊಂಡ ತೇಜಸ್ವಿ ಅವರು ಮಾತನಾಡಿ, ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ದೇಶದ್ರೋಹಗಳಿಗೆ ಮಣೆ ಹಾಕುವ ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎಂದು ಗಂಭೀರ ಆರೋಪವೆಸಗಿದರು.

ಮತದಾರರು ಎಚ್ಚೆತ್ತುಕೊಂಡು ಮತ್ತೆ ಯುಪಿಎ ಸರ್ಕಾರ ಬರದಂತೆ ಜಾಗೃತರಾಗಬೇಕು. ದೇಶಕ್ಕಾಗಿ, ದೇಶ ರಕ್ಷಣೆಗಾಗಿ ನರೇಂದ್ರ ಮೋದಿಯವರೊಬ್ಬರ ಪಣತೊಟ್ಟು ನಿಂತಿರುವರು. ಹತ್ತಾರು ಪಕ್ಷಗಳು ಒಗ್ಗಟ್ಟಾಗಿ ಒಬ್ಬ ನರೇಂದ್ರ ಮೋದಿ ಅವರನ್ನು ಎದುರಿಸಲು ಸುಳ್ಳು ಭರವಸೆಗಳು, ಪೊಳ್ಳು ಆಶ್ವಾಸನೆಗಳನ್ನು ನೀಡಿ ಜನತೆಯನ್ನು ಮರಳು ಮಾಡುವ ಪ್ರಯತ್ನವನ್ನೆಸಗುತ್ತಿದ್ದಾರೆ ಎಂದರು.

ಸ್ಥಳೀಯ ಶಾಸಕ ಸತೀಶ್‌ರೆಡ್ಡಿ, ಮಹಾನಗರ ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮೇ ಮುರಳೀಧರ್‌, ಮಾಜಿ ಮಹಾನಗರ ಪಾಲಿಕೆ ಅಧ್ಯಕ್ಷ ಪುರುಷೋತ್ತಮ್‌, ಮಾಜಿ ನಗರಸಭಾ ಸದಸ್ಯ ಮುರಳೀಧರ ಇತರರಿದ್ದರು.

Latest Videos
Follow Us:
Download App:
  • android
  • ios