ಏ.24ರವರೆಗೆ ರಾಜ್ಯದಲ್ಲಿ ಮದ್ಯದಂಗಡಿ ಬಂದ್
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮದ್ಯದಂಗಡಿ ಬಂದ್ ಮಾಡಲಾಗಿದೆ. ಏಪ್ರಿಲ್ 24ರ ಮುಂಜಾನೆವರೆಗೆ ಮುಚ್ಚಲಾಗಿದೆ.
ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 14 ಕ್ಷೇತ್ರದಲ್ಲಿನ ಮದ್ಯದಂಗಡಿಗಳನ್ನು ಭಾನುವಾರ ಸಂಜೆ 6 ಗಂಟೆಯ ನಂತರ ಮುಚ್ಚಲಾಗಿದೆ.
ಏ.23 ರ ಮಧ್ಯರಾತ್ರಿವರೆಗೆ ಮದ್ಯದಂಗಡಿಗಳು ತೆರೆಯುವಂತಿಲ್ಲ. ಏ.24 ರ ಮುಂಜಾನೆಯಿಂದ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಅಬಕಾರಿ ಇಲಾಖೆಯ ಸಿಬ್ಬಂದಿಯು ಎಲ್ಲಾ 14 ಕ್ಷೇತ್ರಗಳಲ್ಲಿನ ಮದ್ಯದಂಗಡಿಗಳನ್ನು ಸೀಲ್ ಮಾಡಿದೆ.
ಅಕ್ರಮವಾಗಿ ಮದ್ಯ ಸರಬರಾಜು ಮಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಎದು ರಿಸಬೇಕಾಗುತ್ತದೆಂದು ಆಯೋಗ ಎಚ್ಚರಿಕೆ ನೀಡಿದೆ.