Asianet Suvarna News Asianet Suvarna News

ಲೋಕಸಭಾ ಚುನಾವಣೆ : ನಿಖಿಲ್ ಸ್ಪರ್ಧೆಗೆ ಮೂರು ಕಾರಣಗಳು

ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ವೇಳೆ ನಿಖಿಲ್ ಸ್ಪರ್ಧೆ ಮಾಡುತ್ತಿರುವುದು ಏಕೆ ಎಂಬ ಬಗ್ಗೆ ಮೂರು ಪ್ರಬಲ ಕಾರಣಗಳನ್ನು ಸಿಎಂ ಕುಮಾರಸ್ವಾಮಿ ನೀಡಿದ್ದಾರೆ. 

Lok Sabha Election 2019 What Is The Reason Behind Nikhil Contesting
Author
Bengaluru, First Published Mar 15, 2019, 7:42 AM IST

ಮಂಡ್ಯ : ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ವೇಳೆ ನಿಖಿಲ್ ಸ್ಪರ್ಧೆ ಮಾಡುತ್ತಿರುವುದು ಏಕೆ ಎಂಬ ಬಗ್ಗೆ ಮೂರು ಪ್ರಬಲ ಕಾರಣಗಳನ್ನು ಸಿಎಂ ಕುಮಾರಸ್ವಾಮಿ ಮತ್ತು ದೇವೇಗೌಡ ಅವರು ನೀಡಿದ್ದಾರೆ. ಅವುಗಳು ಇಂತಿವೆ.

1 ನನ್ನ ಮಗನನ್ನು ಅಧಿಕಾರಕ್ಕೆ ಕರೆತರುತ್ತಿರುವುದು ಎಂಪಿಯಾಗಿ ಮೆರೆಸೋಕೆ ಅಲ್ಲ. ನೋವಿನಲ್ಲಿ ರುವ ಮಂಡ್ಯ ಜಿಲ್ಲೆಯ ಜನರ ಕಣ್ಣೀರು ಒರೆಸೋಕೆ.

2 ನನಗೆ ಹೃದಯ ಶಸ್ತ್ರಚಿಕಿತ್ಸೆಯಾಗಿ ಅನಾರೋಗ್ಯವಾಗಿದ್ದ ವೇಳೆ ರಾಜಕೀಯವಾಗಿ ನಿಮಗೆ ಬೆಂಬಲವಾಗಿ ನಿಲ್ಲುವೆ, ನಾನು ಹಲವು ಕ್ಷೇತ್ರ ಗಳಿಗೆ ನಿಮ್ಮ ಪರವಾಗಿ ಹೋಗುತ್ತೇನೆ’ ಎಂದ. ಅವನು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡು ನನಗೆ ಬೆಂಬಲವಾಗಿ ನಿಲ್ಲಲು ರಾಜಕೀಯಕ್ಕೆ ಬಂದಿದ್ದಾನೆ.

3 ನಿಖಿಲ್, ಪ್ರಜ್ವರ್‌ರನ್ನು ಕುಟುಂಬ ವ್ಯಾಮೋಹ ದಿಂದ ರಾಜಕಾರಣಕ್ಕೆ ಕರೆತರುತ್ತಿಲ್ಲ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ಸಲುವಾಗಿ ಕರೆತರುತ್ತಿದ್ದೇವೆ. ಮಂಡ್ಯದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ, ತಮ್ಮದು ಕುಟುಂಬ ರಾಜಕಾರಣ ಎಂಬ ಟೀಕೆಗಳಿಗೆ ತಿರುಗೇಟು ನೀಡಿದರು. 

1 ಕಣ್ಣೀರು ಒರೆಸಲು ಕುಮಾರಸ್ವಾಮಿಯ 2 ಬೆಂಬಲವಾಗಿ ನಿಲ್ಲಲು ಜೆಡಿಎಸ್ ಪಕ್ಷವನ್ನು ಮುಂದೆ ಬೆಳೆಸಲು

Follow Us:
Download App:
  • android
  • ios