ಕರ್ನಾಟಕದ ಈ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿ ಘೋಷಣೆ ಬಾಕಿ, ಪ್ರಮುಖ ಪಕ್ಷಗಳ ನಡೆ ಏನು?
ದೇಶದಲ್ಲಿ ಮೂರನೇ ಹಂತ ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಅಂತ್ಯವಾಗಿದ್ದು ಘಟಾನುಘಟಿಗಳು ಸೇರಿದಂತೆ ಹೊಸ ಮುಖಗಳು ಕಣದಲ್ಲಿದ್ದಾರೆ.
ಬೆಂಗಳೂರು[ಮಾ.27] ಇಷ್ಟು ಸಾರಿ ಚುನಾವಣೆಯಲ್ಲಿ ತ್ರಿಕೋನ ಹಣಾಹಣಿಗೆ ವೇದಿಕೆಯಾಗುತ್ತಿದ್ದ ಅಖಾಡಗಳು ಈ ಸಾರಿ ದೋಸ್ತಿ ಸರಕಾರದ ಕಾರಣಕ್ಕೆ ನೇರ ಹಣಾಹಣಿಯ ವೇದಿಕೆಯಾಗಿದೆ. ಅಲ್ಲಲ್ಲಿ ಬಂಡಾಯದ ಮಾತುಗಳು ಕೇಳಿ ಬಂದಿದ್ದರೂ ನಾಮಪತ್ರ ಹಿಂತೆಗೆತಕ್ಕೆ ಮಾ. 29ರವರೆಗೆ ಅವಕಾಶ ಇದೆ.
ಹಾಗಾದರೆ ಯಾವ ಪಕ್ಷ ಇನ್ನು ಮೂರನೇ ಹಂತ ಅಂದರೆ ರಾಜ್ಯದಲ್ಲಿ 2ನೇ ಹಂತದ ಚುನಾವಣೆ ನಡೆಯಲಿರುವ ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ ಮಾಡಿಲ್ಲ ಎನ್ನುವುದಕ್ಕೆ ಉತ್ತರ ಇಲ್ಲಿದೆ. ಮಾರ್ಚ್ 28 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ತೇಜಸ್ವಿನಿ ಅನಂತ್ ಕುಮಾರ್ ಹರಕೆ ಕುರಿ ಆದದ್ದು ಹೀಗೆ...
ಬಾಕಿ ಉಳಿಸಿಕೊಂಡಿರುವ ಕ್ಷೇತ್ರಗಳು
ಬಿಜೆಪಿ: ಕೊಪ್ಪಳ, ರಾಯಚೂರು, ಚಿಕ್ಕೋಡಿ
ಕಾಂಗ್ರೆಸ್ - ಧಾರವಾಡ