ಮೈತ್ರಿ ಸರ್ಕಾರದಿಂದ ಆಡಳಿತ ಯಂತ್ರ ದುರ್ಬಳಕೆ: ಆಯೋಗಕ್ಕೆ ಬಿಜೆಪಿ ದೂರು
ಚುನಾವಣಾ ಲಾಭಕ್ಕಾಗಿ ಮೈತ್ರಿ ಸರ್ಕಾರದಿಂದ ಆಡಳಿತ ಯಂತ್ರ ದುರ್ಬಳಕೆ ಆರೋಪ; ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್- ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಸರ್ಕಾರಿ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮೈತ್ರಿ ಸರ್ಕಾರವು ಆಡಳಿತ ಯಂತ್ರವನ್ನು ದುರ್ಬಳಕೆ ಮಾಡುತ್ತಿದೆ. ಸ್ವಚ್ಚ ಮತ್ತು ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಪಕ್ಷಪಾತಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು, ಸಂಸದ ರಾಜೀವ್ ಚಂದ್ರಶೇಖರ್ ಮತ್ತು ಶಾಸಕ ಸುರೇಶ್ ಕುಮಾರ್ ನಿಯೋಗ ಮನವಿ ಮಾಡಿದೆ.
Met @ceo_karnataka along wth my colleague MLA @nimmasuresh n gave representatin abt rampant misuse of govt machinery by @hd_kumaraswamy n @INCIndia thru biased officers.
— Chowkidar Rajeev Chandrasekhar 🇮🇳 (@rajeev_mp) March 28, 2019
Sought his intrvntion for free n fair elections in #Karnataka @RAshokaBJP @BSYBJP pic.twitter.com/SCXLbqHfWS
My statement today aftr submitting memorandum to Election commission. pic.twitter.com/hDUngeDdb9
— Chowkidar Rajeev Chandrasekhar 🇮🇳 (@rajeev_mp) March 28, 2019
ಕರ್ನಾಟಕದಲ್ಲಿ 2 ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲನೇ ಹಂತದ ಮತದಾನ 18 ಏಪ್ರಿಲ್, ಹಾಗೂ ಎರಡನೇ ಹಂತದ ಮತದಾನ 23 ಏಪ್ರಿಲ್ ರಂದು ನಡೆಯಲಿದೆ. ಮೇ. ೨೩ಕ್ಕೆ ಫಲಿತಾಂಶಗಳು ಪ್ರಕಟವಾಗಲಿದೆ. ಮೊದಲನೇ ಹಂತಕ್ಕೆ ಈಗಾಗಲೇ ನಾಮಪತ್ರ ಸಲ್ಲಿಸುವಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ.