ರಾಜಕಾರಣದ ನಡುವೆ ಒಂದು ಬ್ರೇಕ್... ನಾವು ವೋಟ್ ಒತ್ತೋರು ಹಾಡ್ ಕೇಳ್ಕ ಬನ್ನಿ!
ಮತದಾನ ಪ್ರತೊಯೊಬ್ಬರ ಹಕ್ಕು. ಮತದಾನ ಜಾಗೃತಿಗೆ ಚುನಾವಣಾ ಆಯೋಗ ಒಂದಿಲ್ಲೊಂದು ರೀತಿ ಪ್ರಯತ್ನ ಮಾಡುತ್ತಲೇ ಇರುತ್ತದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿರುವ ಈ ಹಾಡು ಅದೆಲ್ಲದಕ್ಕಿಂತ ಮಿಗಿಲಾಗಿದೆ.
ಬೆಂಗಳೂರು[ಏ. 12] ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಗೆದ್ದಿರುವ ಭರವಸೆಯ ಗಾಯಕ ಗಣೇಶ್ ಕಾರಂತ್ ಧ್ವನಿಯಲ್ಲಿ ಹಾಡು ರಿಂಗಣಿಸುತ್ತ ನಿಮ್ಮನ್ನು ವೋಟಿಂಗ್ ಬೂತ್ ನ ಕಡೆ ಮುಖ ಮಾಡುವಂತೆ ಮಾಡುತ್ತದೆ.
ಯೋಗರಾಜ ಭಟ್ಟರ ಗೀತೆಯೊಂದನ್ನು ಹೊಂದಾಣಿಕೆ ಮಾಡಿಕೊಂಡು ಕೀರ್ತಿ ನಾರಾಯಣ್ ಸಾಹಿತ್ಯ ಬರೆದಿದ್ದಾರೆ. ಮೊದಲೇ ಹೇಳಿದಂತೆ ಗಣೇಶ್ ಕಾರಂತ್ ಧ್ವನಿ ನೀಡಿದ್ದರೆ ವಿವೇಕ್ ಹೆಗಡೆ ಹಿತ್ಲಳ್ಳಿ ಸಂಕಲನ ಸೇರಿದಂತೆ ಜವಾಬ್ದಾರಿ ನಿರ್ವಹಿಸಿದ್ದಾರೆ.
ನಿಜಾಮಾಬಾದ್ನಲ್ಲಿ ಇವಿಎಂ ಬಳಕೆಯಲ್ಲಿ ಗಿನ್ನೆಸ್ ದಾಖಲೆ?
‘ನಾವು ದನ ಕಾಯೋರು’ ಹಾಡನ್ನು ಎಲೆಕ್ಷನ್ ಜಾಗೃತಿಗೆ ಬಳಸಿಕೊಂಡಿರುವ ಯುವ ಬಳಗಕ್ಕೆ ಒಂದು ಅಭಿನಂದನೆ ಹೇಳುತ್ತ ಮರೆಯದೇ ನಾವೇಲ್ಲರೂ ಓಟ್ ಮಾಡೋಣ...