Asianet Suvarna News Asianet Suvarna News

ಎಲೆಕ್ಷನ್‌ ಮುಗಿದ ಬೆನ್ನಲ್ಲೇ ವಿವಾದಿತ ಸಚಿವನಿಗೆ ಸಿಎಂ ಯೋಗಿ ಗೇಟ್‌ಪಾಸ್‌

ಎಲೆಕ್ಷನ್‌ ಮುಗಿದ ಬೆನ್ನಲ್ಲೇ ವಿವಾದಿತ ಸಚಿವ ರಾಜ್‌ಭರ್‌ಗೆ ಸಿಎಂ ಯೋಗಿ ಗೇಟ್‌ಪಾಸ್‌| ಸಿಎಂ ಯೋಗಿ ನಿರ್ಧಾರವನ್ನು ರಾಜ್‌ಭರ್‌ ಕೂಡಾ ಸ್ವಾಗತಿಸಿದ್ದಾರೆ

Day After Exit Polls Yogi Adityanath Removes BJP Ally From UP Cabinet
Author
Bangalore, First Published May 21, 2019, 8:23 AM IST

ಲಖನೌ[ಮೇ.21]: ತಮ್ಮ ಸರ್ಕಾರ ಮತ್ತು ತಮ್ಮನ್ನು ಬಹಿರಂಗವಾಗಿಯೇ ಟೀಕಿಸುತ್ತಿದ್ದ ಎಸ್‌ಬಿಎಸ್‌ಪಿ ಪಕ್ಷದ ನಾಯಕ ಸಚಿವ ಓಂ ಪ್ರಕಾಶ್‌ ರಾಜ್‌ಭರ್‌ ಅವರನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಸಚಿವ ಸಂಪುಟದಿಂದ ಕೈಬಿಟ್ಟಿದ್ದಾರೆ.

ಈ ನಡುವೆ ಸಿಎಂ ಯೋಗಿ ನಿರ್ಧಾರವನ್ನು ರಾಜ್‌ಭರ್‌ ಕೂಡಾ ಸ್ವಾಗತಿಸಿದ್ದಾರೆ. ಲೋಕಸಭಾ ಚುನಾವಣೆಯುದ್ದಕ್ಕೂ ರಾಜಭರ್‌ ಅವರು ಯೋಗಿ ಸರ್ಕಾರವನ್ನು ಬಹುವಾಗಿ ಟೀಕಿಸಿದ್ದರು. ಜೊತೆಗೆ ಎಸ್‌ಪಿ- ಬಿಎಸ್‌ಪಿ ಮೈತ್ರಿಕೂಟ ಬೆಂಬಲಿಸಿದ್ದರು. ಎನ್‌ಡಿಎ ಮಿತ್ರ ಪಕ್ಷವಾಗಿದ್ದ ಎಸ್‌ಬಿಎಸ್‌ಪಿ 2017ರ ವಿಧಾನಸಭೆ ಚುನಾವಣೆಯಲ್ಲಿ 4 ಸ್ಥಾನ ಗಳಿಸಿತ್ತು.

ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನದ ಬೇಡಿಕೆ ಇಟ್ಟಿದ್ದ ಎಸ್ಪಿಎಸ್ಪಿಗೆ ಅವಕಾಶ ನೀಡದ ಕಾರಣ, ಹಲವು ಕ್ಷೇತ್ರಗಳಲ್ಲಿ ಸ್ವತಂತ್ರ್ಯವಾಗಿ ಕಣಕ್ಕಿಳಿದಿತ್ತು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

Follow Us:
Download App:
  • android
  • ios