Asianet Suvarna News Asianet Suvarna News

ಮಂಡ್ಯ: ಜೆಡಿಎಸ್ ಸಮಾವೇಶದಲ್ಲಿ ಮೊಳಗಿತು 'ಡಿ ಬಾಸ್' ಘೋಷಣೆ..!

ಮಂಡ್ಯ ಕಣ ರಣರಂಗವಾಗಿದ್ದು, ಇಂದು ಕೆ.ಆರ್​.ಪೇಟೆಯಲ್ಲಿ  ನಡೆದ ಜೆಡಿಎಸ್​ ಸಮಾವೇಶದಲ್ಲಿಯೂ ಡಿ ಬಾಸ್​ ಕೂಗು ಕೇಳಿಬಂದಿದೆ.

D Boss Devegowda JDS Workers Taunts Actor Darshan In Mandya
Author
Bengaluru, First Published Apr 4, 2019, 7:57 PM IST

ಮಂಡ್ಯ, [ಏ.04] ಸಕ್ಕರೆ ನಾಡಿನ ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಚಾರದ ಸದ್ದು ಜೋರಾಗಿಯೇ ಕೇಳಿಬರುತ್ತಿದೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಪರ ನಟ ದರ್ಶನ್​ ಕಹಳೆ ಮೊಳಗಿಸಿದ್ದು, ಹೋದಲೆಲ್ಲ ಡಿ ಬಾಸ್​ ಎಂಬ ಘೋಷಣೆ ಕೇಳಿಬರುತ್ತದೆ. 
ಆದರೆ, ಇತ್ತ ಇಂದು [ಗುರುವಾರ] ಕೆ.ಆರ್​.ಪೇಟೆಯಲ್ಲಿ  ನಡೆದ ಜೆಡಿಎಸ್​ ಸಮಾವೇಶದಲ್ಲಿಯೂ ಡಿ ಬಾಸ್​ ಕೂಗು ಕೇಳಿಬಂದಿದೆ. ಡಿ ಬಾಸ್​ ಅಂದರೆ ದರ್ಶನ್​ ಅಲ್ಲ. ಬದಲಾಗಿ ದೇವೇಗೌಡ ಬಾಸ್​ ಎಂದು ಜೆಡಿಎಸ್​ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. 

ದರ್ಶನ್ ಕಂಡರೆ ಸಿಎಂ ಉರಿದು ಬೀಳಲು ಇಲ್ಲಿವೆ ಐದು ಕಾರಣಗಳು

ಸಮಾವೇಶದಲ್ಲಿ ದೇವೇಗೌಡರನ್ನು ಉದ್ದೇಶಿಸಿ ಅವರು ಮಾಡಿರುವ ವಿವಿಧ ಸಾಧನೆಗಳ ಮೇಲೆ ಘೋಷಣೆ ಕೂಗಿ ಕಾರ್ಯಕರ್ತರು ಎದುರಾಳಿಗಳಿಗೆ ಟಾಂಗ್​ ನೀಡಿದರು. 

ಡಿ ಬಾಸ್​ ದೇವೇಗೌಡ ಬಾಸ್​, ದುಡಿಮೆಯ ಬಾಸ್​ ದೇವೇಗೌಡ ಬಾಸ್​, ಮಂಡ್ಯದ ಬಾಸ್​ ದೇವೇಗೌಡ ಬಾಸ್​, ನೀರಾವರಿ ಯೋಜನೆಯ ಬಾಸ್​ ದೇವೇಗೌಡ ಬಾಸ್​, ಕಾವೇರಿ ಹೋರಾಟದ ಬಾಸ್​ ದೇವೇಗೌಡ ಬಾಸ್​, ಬಾಸ್​ ಬಾಸ್​ ದೇವೇಗೌಡ ಬಾಸ್​ ಅಂತೆಲ್ಲಾ ಘೋಷಣೆ ಮೊಳಗಿಸಿದರು.

 ದರ್ಶನ್ ಹಾಗೂ ಯಶ್ ಜೋಡೆತ್ತು ಎನ್ನುವುದಕ್ಕೆ ಈ ಹಿಂದೆ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿ, ಅವು ಜೋಡೆತ್ತು ಅಲ್ಲ. ರೈತರು ಬೆಳೆ ಪೈರನ್ನು ತಿನ್ನುವ ಕಳ್ಳೆತ್ತು ಎಂದು ಟಾಂಗ್ ಕೊಟ್ಟುರುವುದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios