Asianet Suvarna News Asianet Suvarna News

‘ಜಯಮಾಲಾ ಮುಖ್ಯಮಂತ್ರಿಗೆ ಸಂಸ್ಕಾರ ಕಲಿ​ಸಲಿ’

ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ನಾಯಕರ ನಡುವೆ ವಾಕ್ಸಮರ ಜೋರಾಗಿದೆ. ಸಚಿವೆ ಜಯಮಾಲ ವಿರುದ್ಧ ಗರಂ ಆಗಿರುವ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. 

CT Ravi Slams Karnataka Minister Jayamala
Author
Bengaluru, First Published Apr 18, 2019, 8:39 AM IST

ದಾವ​ಣ​ಗೆರೆ: ಸಿ.ಟಿ.ರವಿ ಮಹಿಳೆಯರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ ಎಂಬ ಸಚಿವೆ ಜಯಮಾಲಾ ಆರೋಪಕ್ಕೆ ತಿರುಗೇಟು ನೀಡಿರುವ ಶಾಸಕ ಸಿ.ಟಿ.ರವಿ, ಜಯಮಾಲಾ ಮೊದಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಂಸ್ಕಾರ ಕಲಿಸಲಿ ಎಂದು ಹೇಳಿದ್ದಾರೆ. 

ನಗ​ರ​ದಲ್ಲಿ ಬುಧ​ವಾರ ಸುದ್ದಿ​ಗೋ​ಷ್ಟಿ​ಯಲ್ಲಿ ಮಾತ​ನಾ​ಡಿದ ಅವರು, ಉಂಡ ಮನೆಗೆ ದ್ರೋಹ ಬಗೆ​ದ​ವ​ರನ್ನು ಏನಂತಾ​ರೆ ಎಂಬು​ದಾಗಿ ನಾನು ಪ್ರಶ್ನಿ​ಸಿ​ದ್ದಕ್ಕೆ ಮಂಡ್ಯದ ಜನರೇ ಉತ್ತ​ರಿ​ಸಿದ್ದ ಪದ ಅದಾ​ಗಿತ್ತೇ ಹೊರತು, ನನ್ನಿಂದ ಬಂದ ಮಾತು ಅದಾಗಿ​ರ​ಲಿಲ್ಲ. ತಾಯಿ ಸಂಸ್ಕಾರ, ಸಾರ್ವ​ಜ​ನಿಕ ಸಭ್ಯತೆ ಅಂತ​ಹ​ದ್ದ​ನ್ನೆಲ್ಲಾ ನನಗೆ ಕಲಿ​ಸಿ​ಕೊ​ಟ್ಟಿಲ್ಲ. 

ಹೆಣ್ಣು ಮಕ್ಕಳು, ತಾಯಂದಿ​ರ ಬಗ್ಗೆ ಅಪಾರ ಗೌರ​ವ​ ಹೊಂದಿ​ರು​ವ​ವನು ನಾನು ಎಂದು ಅವರು ಸಚಿವೆ ಜಯ​ಮಾಲ ಟೀಕೆಗೆ ಪ್ರತಿ​ಕ್ರಿ​ಯಿ​ಸಿ​ದರು. ಮಹಿ​ಳೆ​ಯರ ಬಗ್ಗೆ ಸಚಿವೆ ಜಯ​ಮಾ​ಲಾ​ರಿಗೆ ಅಷ್ಟೊಂದು ಕಾಳಜಿ ಇದ್ದರೆ ರೈತ ಮಹಿ​ಳೆಗೆ ಇಷ್ಟುದಿನ ಎಲ್ಲಿ ಮಲ​ಗಿದ್ದೆ ಎಂದು ಕೇಳಿದ, ಸುಮ​ಲತಾ ಅಂಬ​ರೀಶ್‌ಗೆ ಇನ್ನಿ​ಲ್ಲದ ಕಾಟ ಕೊಟ್ಟಸಿಎಂ ಕು​ಮಾ​ರ​ಸ್ವಾ​ಮಿಗೆ ಸಂಸ್ಕಾರ ಕಲಿ​ಸಲಿ ಎಂದು ಸಲಹೆ ನೀಡಿದ್ದಾರೆ.

Follow Us:
Download App:
  • android
  • ios