Asianet Suvarna News Asianet Suvarna News

'ಸಿಎಂ ಕುಮಾರಸ್ವಾಮಿ ಒಂಥರಾ ಹಿಟ್ & ರನ್ ಇದ್ದಂತೆ'

ಪುಲ್ವಾಮಾ ದಾಳಿ ಬಗ್ಗೆ ನಾನು ಮಾತನಾಡಿಲ್ಲ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಯಿಸಿರುವ ಮಾಜಿ ಸಿಎಂ ಜಗದ್ದೀಶ್​​ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

CM Kumaraswamy Hit and Run Man Says Jagadish Shettar In Koppal
Author
Bengaluru, First Published Apr 7, 2019, 5:14 PM IST

ಕೊಪ್ಪಳ, [ಏ.07]: ಪುಲ್ವಾಮಾ ದಾಳಿ ಬಗ್ಗೆ ನಾನು ಮಾತನಾಡಿಲ್ಲ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಜಗದ್ದೀಶ್​​ ಶೆಟ್ಟರ್, ಕುಮಾರಸ್ವಾಮಿ ಒಂಥರಾ ಹಿಟ್ & ರನ್ ಇದ್ದಂತೆ ಎಂದು ಲೇವಡಿ ಮಾಡಿದ್ದಾರೆ. 

ಕೊಪ್ಪಳ ಜಿಲ್ಲೆಯ ಹುಲಗಿ ಗ್ರಾಮದಲ್ಲಿ ಇಂದು [ಭಾನುವಾರ] ಸುದ್ದಿಗಾರರ ಜೊತೆ ಮಾತನಾಡಿದ ಜಗದ್ದೀಶ್​​​ ಶೆಟ್ಟರ್,  ಮೊದಲು ಹೇಳುವುದು- ಮೈ ಮೇಲೆ ಬರುತ್ತಿದ್ದಂತೆಯೇ ನಾ ಹೇಳಿಲ್ಲ ಅಂತಾರೆ. ಈ ಹಿಂದೆಯೂ ಸಾಕಷ್ಟು ಬಾರಿ ಹೀಗೆ ಮಾತಾಡಿದ್ದಾರೆ ಎಂದು ಕಿಡಿಕಾರಿದರು.

ಪುಲ್ವಾಮಾ ಬಗ್ಗೆ HDKಗೆ 2 ವರ್ಷದ ಹಿಂದೆಯೇ ಗೊತ್ತಿತ್ತಂತೆ..!

ಇನ್ನು ಸಚಿವ ಸಿ.ಎಸ್.ಪುಟ್ಟರಾಜು ಮತ್ತು ಮಾಜಿ ಸಂಸದ ಜಿ.ಮಾದೇಗೌಡ ನಡುವಿನ ಸಂಭಾಷಣೆ ಆಡಿಯೋ ವೈರಲ್ ವಿಚಾರಕ್ಕೆ ಮಾಜಿ ಸಿಎಂ ಜಗದ್ದೀಶ್​​ ಶೆಟ್ಟರ್ ಪ್ರತಿಕ್ರಿಯಿಸಿದ್ದು, ಐಟಿ ದಾಳಿ ಆಗಿದ್ದಾಗ ಸಿಎಂ ಕುಮಾರಸ್ವಾಮಿ- ಡಿ.ಕೆ.ಶಿವಕುಮಾರ ಪ್ರತಿಭಟನೆ ಮಾಡಿದ್ದರು.

ಈಗ ಆಡಿಯೋ ವೈರಲ್ ಆಗಿರೋದು ನಾಚಿಕಗೇಡು. ಹಣದ ವ್ಯವಹಾರ ಶುರುವಾಗಿದೆ. ಹಣ ಹಂಚಿಕೆ ಆರಂಭವಾಗಿದೆ.  ಮತದಾರರಿಗೆ ಆಮಿಷ ವೊಡ್ಡುವುದು ಆರಂಭವಾಗಿದೆ. ಈ ಆಡಿಯೋ ಮೇಲ್ನೋಟದ ಸಾಕ್ಷಿ ಎಂದರು.

Follow Us:
Download App:
  • android
  • ios