ಚಕ್ರವರ್ತಿ ಎಂಬ ಮಾಂತ್ರಿಕನಿಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಇಷ್ಟು ಗೆಲ್ತಾ ಇರ್ಲಿಲ್ಲ!
ಕರ್ನಾಟಕದಲ್ಲಿ ಬಿಜೆಪಿ ಇಷ್ಟೊಂದು ದೊಡ್ಡ ಪ್ರಮಾಣದ ಗೆಲುವು ಸಾಧಿಸಲು ಅನೇಕರು ಕಾರಣರಿದ್ದಾರೆ. ಆದರೆ ಸೋಶಿಯಲ್ ಮೀಡಿಯಾ ಮಾತ್ರ ಈ ವ್ಯಕ್ತಿಯ ಹೆಸರನ್ನು ಕೊಂಡಾಡುತ್ತಿದೆ.
ಬೆಂಗಳೂರು[ಮೇ. 23] 28 ಲೋಕಸಭಾ ಕ್ಷೇತ್ರಗಳ ಪೈಕಿ ಕರ್ನಾಟಕದಲ್ಲಿ ಬಿಜೆಪಿ 25 ರಲ್ಲಿ ಗೆಲುವಿನ ನಗೆ ಬೀರಿದೆ. ಪಕ್ಷದ ಕಾರ್ಯಕರ್ತರು , ನಾಯಕರು, ರಾಷ್ಟ್ರೀಯ ನಾಯಕರು ಇದಕ್ಕೆ ಒಂದು ಕಡೆ ಕಾರಣವಾದರೆ ಇನ್ನೊಬ್ಬ ವ್ಯಕ್ತಿ ಸಹ ಇದರ ಹಿಂದೆ ಇದ್ದಾರೆ.
ಟೀಂ ಮೋದಿ ತಂಡದ ಮೂಲಕ ಸದಾ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಭಾಷಣಕಾರ, ಚಿಂತಕ ಚಕ್ರವರ್ತಿ ಸೂಲಿಬೆಲೆಯವರನ್ನು ಅಭಿನಂದಿಸಿ ಸೋಶಿಯಲ್ ಮಿಡಿಯಾ ಮೆಚ್ಚುಗೆ ಸೂಚಿಸುತ್ತಿದೆ.
ಮೋದಿ ಮತ್ತೆ ಯಾಕೆ ಭಾರತದ ಪ್ರಧಾನಿಯಾಗಬೇಕು ಎಂದು ಸೂಲಿಬೆಲೆ ನಿರಂತರವಾಗಿ ಹೇಳಿಕೊಂಡು ಬಂದಿದ್ದರು. ತಮ್ಮ ಭಾಷಣಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿಯೂ ಅಪಾರ ಮಾಹಿತಿ ಒದಗಿಸುತ್ತಲೇ ಬಂದಿದ್ದರು.